ಸಂಚಾರಿ ಕಾನ್ಸ್‌ಟೇಬಲ್ ಹೇಮಣ್ಣಗೆ ಶ್ಲ್ಯಾಘನೆ ಪತ್ರ

ರಸ್ತೆಯಲ್ಲಿ ಗುಂಡಿ ಮುಚ್ಚಿ ಸಾಮಾಜಿಕ ಕಾಳಜಿ ಮೆರೆದಿದ್ದಕ್ಕೆ ಅಭಿನಂದನೆ

ದಾವಣಗೆರೆ, ಡಿ.17- ಇಲ್ಲಿನ ದಕ್ಷಿಣ ಸಂಚಾರ ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪೊಲೀಸ್ ಕಾನ್ಸ್‌ಟೇಬಲ್ ಎಸ್. ಹೇಮಣ್ಣ ಅವರ ಸಾಮಾಜಿಕ ಕಾಳಜಿ ಮೆಚ್ಚಿ ಎಸ್ಪಿ ಸಿ.ಬಿ. ರಿಷ್ಯಂತ್ ಅವರು ಜಿಲ್ಲಾ ಪೊಲೀಸ್ ಇಲಾಖೆಯ ಪರವಾಗಿ ಶ್ಲ್ಯಾಘನೀಯ ಪತ್ರ ನೀಡಿ ಅಭಿನಂದಿಸಿದರು. 

ಎಸ್. ಹೇಮಣ್ಣ ಕಳೆದ ನವೆಂಬರ್ 24ರಂದು ನಗರದ ಗುಂಡಿ ವೃತ್ತದಲ್ಲಿ ಕರ್ತವ್ಯ ನಿರ್ವಹಿಸುವಾಗ ಮಳೆಯಿಂದ ರಸ್ತೆಯಲ್ಲಿ ಗುಂಡಿ ಬಿದ್ದು ವಾಹನ ಸವಾರರು ಸಂಚಾರಕ್ಕೆ ಕಷ್ಟಪಡುವುದನ್ನು ಕಂಡು ಕೂಡಲೇ ಅಲ್ಲಿಯೇ ರಸ್ತೆ ಪಕ್ಕದಲ್ಲಿದ್ದ ಜೆಲ್ಲಿಕಲ್ಲುಗಳಿಂದ ಗುಂಡಿ ಮುಚ್ಚಿ ವಾಹನ ಸವಾರರು ಸರಾಗವಾಗಿ ಸಂಚರಿಸಲು ಅನುವು ಮಾಡಿದ್ದರು. ಈ ಸಾಮಾ ಜಿಕ ಕಾಳಜಿಯ ಕಾರ್ಯಕ್ಕೆ ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗಿತ್ತು. ಇದು ಪೊಲೀಸ್ ಇಲಾಖೆಯ ಘನತೆ ಹೆಚ್ಚಿಸುವ ಕಾರ್ಯಯೂ ಆಗಿದೆ ಎಂದು ಎಸ್ಪಿ ರಿಷ್ಯಂತ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

error: Content is protected !!