ಜಿಲ್ಲೆಗೆ ಏಕಲವ್ಯ ವಸತಿಯುತ ಶಾಲೆ ಮಂಜೂರಿಗೆ ಸಂಸದರ ಪ್ರಯತ್ನ

ದಾವಣಗೆರೆ, ಡಿ.16- ಜಗಳೂರು ತಾಲ್ಲೂಕಿನಲ್ಲಿ ಏಕಲವ್ಯ ಮಾದರಿ ವಸತಿ ಶಾಲೆಯನ್ನು ಮಂಜೂರು ಮಾಡಿಕೊಂಡುವಂತೆ ಕೇಂದ್ರ ಬುಡಕಟ್ಟು ವ್ಯವಹಾ ರಗಳ ಸಚಿವ ಅರ್ಜುನ್ ಮುಂಡಾ ಜಿ ಅವರನ್ನು ದೆಹಲಿಯಲ್ಲಿ ಸಂಸದ ಜಿ.ಎಂ.ಸಿದ್ದೇಶ್ವರ ಅವರು ಇಂದು ಭೇಟಯಾಗಿ ಮನವಿ ಮಾಡಿದ್ದಾರೆ.

ಸಂಸದರ ಕ್ರಮವನ್ನು ಸ್ವಾಗತಿಸಿರುವ ಜಿಲ್ಲೆಯ ಶೋಷಿತ ವರ್ಗಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಬಾಡದ ಆನಂದರಾಜ್, ಜಿಲ್ಲೆಗೆ ಏಕಲವ್ಯ ವಸತಿಯುತ ಶಾಲೆ ತುಂಬಾ ಅವಶ್ಯಕತೆಯಿದ್ದು, ಶಿಕ್ಷಣದಿಂದ ವಂಚಿತ ರಾಗಿರುವ  ಹಿಂದುಳಿದ ಸಮುದಾಯಗಳಿಗೆ ಅನುಕೂಲವಾಗಲಿದೆ ಎಂದರು. 

ಸರ್ಕಾರಿ ಮೆಡಿಕಲ್ ಕಾಲೇಜು ಮತ್ತು ಅಟಲ್ ಬಿಹಾರಿ ವಾಜಪೇಯಿ ವಸತಿಯುತ ಮತ್ತೊಂದು ಶಾಲೆಯನ್ನು ಆದಷ್ಟು ಬೇಗ ಪ್ರಾರಂಭಿಸುವಂತೆ ಆನಂದರಾಜ್ ಅವರು ಸಂಸದರನ್ನು ಒತ್ತಾಯಿಸಿದ್ದಾರೆ. 

error: Content is protected !!