ಪ್ಯಾರಾ ಬ್ಯಾಡ್ಮಿಂಟನ್ ಕ್ರೀಡೆಗೆ ಯಶವಂತ್‌ರಾವ್ ಪ್ರೋತ್ಸಾಹ

ದಾವಣಗೆರೆ, ಡಿ.15- ನಗರದ ಎಸ್.ಒ.ಜಿ ಕಾಲೋನಿ ರಾಮನಗರದ ಪ್ರಸನ್ನ ಅವರು ಒರಿಸ್ಸಾದ ಭುವನೇಶ್ವರದಲ್ಲಿ ಅಂತರರಾಷ್ಟ್ರೀಯ ಪ್ಯಾರಾ ಬ್ಯಾಡ್ಮಿಂಟನ್ ಕ್ರೀಡೆಗೆ ಆಯ್ಕೆಯಾಗಿದ್ದಾರೆ. ಪ್ರಸನ್ನ ಅವರಿಗೆ ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಯಶವಂತರಾವ್ ಜಾಧವ್ ಅವರು ಬ್ಯಾಟ್ ಕೊಡಿಸುವ ಮೂಲಕ ಕ್ರೀಡೆಗೆ ಪ್ರೋತ್ಸಾಹಿಸಿದ್ದಾರೆ. ಪ್ರಸನ್ನ ಅವರು ಕ್ರೀಡೆಯಲ್ಲಿ ಜಯಶಾಲಿಯಾಗಿ ಬರಲೆಂದು ಶುಭ ಕೋರಿದ್ದಾರೆ. 

ಈ ಸಂದರ್ಭದಲ್ಲಿ ಮನೋಹರ ರಾವ್ ಪೈಲ್ವಾನ್,  ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಎಂ.ಗೋಪಾಲರಾವ್, ಬಿಜೆಪಿ ಯುವ ಮುಖಂಡರಾದ ಪ್ರವೀಣ್ ಕುಮಾರ್ ಜಾದವ್, ಚೇತನ್ ರಾವ್, ಗಣೇಶ್ ರಾವ್ ಹಾಗೂ ಮತ್ತಿತರರು ಪ್ರಸನ್ನ ಅವರನ್ನು ಅಭಿನಂದಿಸಿದ್ದಾರೆ.

error: Content is protected !!