ಪಾರ್ವತಿ-ಪರಮೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ

ದಾವಣಗೆರೆ, ಡಿ.13- ದಿವ್ಯ ಕಾಶಿ ಭವ್ಯ ಕಾಶಿ ನಿಮಿತ್ಯ ಉತ್ತರ ವಿಧಾನಸಭಾ ಕ್ಷೇತ್ರದ ಬಿಜೆಪಿಯಿಂದ ವಿದ್ಯಾನಗರದ ಪಾರ್ವತಿ-ಪರಮೇಶ್ವರ ದೇವಸ್ಥಾನದಲ್ಲಿ ಇಂದು ವಿಶೇಷ ಪೂಜೆ ನೆರವೇರಿಸಲಾಯಿತು. 

ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಎಸ್‌. ಜಗದೀಶ್‌ ಮಾತನಾಡಿದರು. ಉತ್ತರ ಮಂಡಲದ ಪ್ರಧಾನ ಕಾರ್ಯದರ್ಶಿ ಬಸವರಾಜಯ್ಯ, ಮಹಾನಗರ ಪಾಲಿಕೆ ಸದಸ್ಯರಾದ ಶ್ರೀಮತಿ ಗೀತಾ ದಿಳ್ಯಪ್ಪ, ರಾಜು ಶಾಮನೂರು, ಹೇಮಂತ್‌ಕುಮಾರ್‌, ಶ್ರೀನಿವಾಸ್‌, ಸರ್ವಮಂಗಳಮ್ಮ, ಭಾಗ್ಯಮ್ಮ, ಸವಿತಾ ನಾಯ್ಕ, ರವಿನಾಯ್ಕ, ಶಶಿಕಲಾ, ಶಾಂತದೊರೆ, ಶಿವಕುಮಾರ್‌ ಇನ್ನೂ ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

error: Content is protected !!