ಜಿಲ್ಲಾ ಕಾಂಗ್ರೆಸ್ ಎಸ್ಸಿ ಘಟಕದಿಂದ ಕಾಂಗ್ರೆಸ್ ಸದಸ್ಯತ್ವ ನೋಂದಣಿ

ದಾವಣಗೆರೆ, ಡಿ. 13- ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಜಾತಿ ವಿಭಾಗದ ವತಿಯಿಂದ ಕಾಂಗ್ರೆಸ್ ಪಕ್ಷದ ಸದಸ್ಯತ್ವ ನೋಂದಣಿ ಕಾರ್ಯಕ್ರಮಕ್ಕೆ   ಪ.ಜಾ. ವಿಭಾಗದ ಜಿಲ್ಲಾಧ್ಯಕ್ಷ  ಬಿ.ಹೆಚ್.ವೀರಭದ್ರಪ್ಪ ಚಾಲನೆ ನೀಡಿದರು.

ರಾಜ್ಯ ಉಪಾಧ್ಯಕ್ಷ ಹೆಚ್. ನಾಗರಾಜ್, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಅನಿತಾಬಾಯಿ ಮಾಲತೇಶ್, ಕಾರ್ಯದರ್ಶಿ ಎಸ್. ಮಲ್ಲಿಕಾರ್ಜುನ್, ಮಹಾನಗರ ಪಾಲಿಕೆ ಸದಸ್ಯರುಗಳಾದ ಜಿ.ಡಿ. ಪ್ರಕಾಶ್, ಮೀನಾಕ್ಷಿ ಎಂ. ಜಗದೀಶ್, ಸಾಮಾಜಿಕ ಜಾಲತಾಣದ ಜಿಲ್ಲಾಧ್ಯಕ್ಷ ಹರೀಶ್ ಕೆ.ಎಲ್. ಬಸಾಪುರ, ಎಸ್ಸಿ ಘಟಕದ ಉಪಾಧ್ಯಕ್ಷರಾದ ಬಿ.ಎಂ. ಈಶ್ವರ್, ಆದಾಪುರ ನಾಗರಾಜ್, ಪಿ. ತಿಮ್ಮೇಶ್, ರಾಜ್ಯ ಸಂಚಾಲಕ ತಿಮ್ಮಪ್ಪ, ಉತ್ತರ ವಲಯದ ಅಧ್ಯಕ್ಷ ಬಿ.ಎಂ. ರಂಗನಾಥಸ್ವಾಮಿ, ದಕ್ಷಿಣ ವಲಯ ಅಧ್ಯಕ್ಷ ಎಲ್. ವೀರೇಶ್, ಮಹಿಳಾ ಕಾಂಗ್ರೆಸ್‌ನ ಕವಿತಾ ಚಂದ್ರಶೇಖರ್, ಗೀತಾ, ಸಲ್ಮಾ ಬಾನು, ಮುಖಂಡರಾದ ದಾದಾಪೀರ್, ನಾಗರಾಜ್, ಆನೆಕೊಂಡ ಕರಿಬಸಪ್ಪ, ಜಿಲ್ಲಾ ಕಾಂಗ್ರೆಸ್ ಸಮಿತಿ ಪರಿಶಿಷ್ಟ ಜಾತಿ ವಿಭಾಗದ ಪ್ರಧಾನ ಕಾರ್ಯದರ್ಶಿ ಜಿ. ರಾಕೇಶ್ ಉಪಸ್ಥಿತರಿದ್ದರು.

error: Content is protected !!