22.87 ಲಕ್ಷ ರೂ. ಲಾಭದಲ್ಲಿ ಸಿಟಿ ಕೋ-ಆಪರೇಟಿವ್ ಬ್ಯಾಂಕ್‌

ದಾವಣಗೆರೆ, ಡಿ.13- ನಗರದ ಸಿಟಿ ಕೋ-ಆಪರೇಟಿವ್‌ ಬ್ಯಾಂಕ್‌ನ 29ನೇ ವಾರ್ಷಿಕ ಮಹಾಸಭೆಯು ನಗರದ ಸದ್ಯೋಜಾತ ಶಿವಾಚಾರ್ಯ ಮಹಾಸ್ವಾಮಿಗಳ ಶಿವಾಚಾರ್ಯ ನಿಕೇತನ ಹಿರೇಮಠದಲ್ಲಿ ನಿನ್ನೆ ನಡೆಯಿತು.

ಬ್ಯಾಂಕ್‌ನ ಅಧ್ಯಕ್ಷ ಎನ್‌.ಜೆ. ಗುರುಸಿದ್ಧಯ್ಯ ಅವರು ಬ್ಯಾಂಕಿನ ಪ್ರಗತಿಯ ಬಗ್ಗೆ ವಿವರವಾಗಿ ತಿಳಿಸುತ್ತಾ, ಬ್ಯಾಂಕು 22 ಲಕ್ಷದ 87 ಸಾವಿರ ಲಾಭದಲ್ಲಿ ಮುನ್ನಡೆಯುತ್ತಿದೆ. ಇಂದಿಗೆ 2850 ಸದಸ್ಯರನ್ನು ಹೊಂದಿದೆ. ಮುಂದಿನ ಮಹಾಸಭೆಯ ವೇಳೆಗೆ ಬ್ಯಾಂಕ್‌ಗೆ ಒಂದು ನಿವೇಶನ ಖರೀದಿ ಮಾಡುವುದಾಗಿ ತಿಳಿಸಿದರು.

ನಿರ್ದೇಶಕ ಬಿ.ಹೆಚ್‌. ಪರಶುರಾಮಪ್ಪ ಲಾಭ-ನಷ್ಟ ಮತ್ತು ಆಸ್ತಿ-ಜವಾಬ್ದಾರಿ ತಃಖ್ತೆ ಹಾಗೂ ನಿವ್ವಳ ಲಾಭ ವಿಭಾಗಣೆಯನ್ನು ಓದುವ ಮೂಲಕ ಸಭೆಯ ಒಪ್ಪಿಗೆ ಪಡೆದರು.  ಉಪಾಧ್ಯಕ್ಷ ನಿರಂಜನ್‌ ನಿಶಾನಿಮಠ್ ಆಯವ್ಯಯ ಪತ್ರವನ್ನು ಓದಿ ಸಭೆಯ ಒಪ್ಪಿಗೆ ಪಡೆದರು. ವೃತ್ತಿಪರ ನಿರ್ದೇಶಕ ಡಾ. ಎಂ. ಸೋಮಶೇಖರಪ್ಪ ಮಾತನಾಡಿದರು. ಬ್ಯಾಂಕ್‌ ಶೇ. 8 ಡಿವಿಡೆಂಡ್‌ ನೀಡಲು ಸಭೆ ಒಪ್ಪಿಗೆ ನೀಡಿತು. ಎನ್‌.ವಿ. ಬಂಡಿವಾಡ ವಂದಿಸಿದರು. ವ್ಯವಸ್ಥಾಪಕ ಮಂಜುನಾಥ್ ಕಾರ್ಯಕ್ರಮ ನಿರೂಪಿಸಿದರು.

error: Content is protected !!