ಮತದಾರರಿಗೆ ಅಭಿನಂದಿಸಿದ ಎಂ.ಪಿ. ಲತಾ

ಹರಪನಹಳ್ಳಿ, ಡಿ.10- ಪಟ್ಟಣದ ಪುರಸಭಾ ಮತಗಟ್ಟೆಯಲ್ಲಿ ಮತ ಚಲಾಯಿಸಿ ಹೊರಗೆ ಬಂದ ಕಾಂಗ್ರೆಸ್ ಪುರಸಭಾ ಸದಸ್ಯರನ್ನು ಕೆಪಿಸಿಸಿ ಮಹಿಳಾ ಪ್ರಧಾನ ಕಾರ್ಯದರ್ಶಿ ಎಂ.ಪಿ.ಲತಾ ಅವರು ಅಭಿನಂದಿಸಿ ಕಾಂಗ್ರೆಸ್ ಅಭ್ಯರ್ಥಿ ಯ ಗೆಲುವಿನ ವಿಶ್ವಾಸ ವ್ಯಕ್ತ ಪಡಿಸಿದರು. 

ಈ ವೇಳೆ  ಪುರಸಭೆ ಸದಸ್ಯರುಗಳಾದ ಎಂ.ವಿ.ಅಂಜಿನಪ್ಪ, ಡಿ.ಅಬ್ದುಲ್ ರಹಿಮಾನ್, ಟಿ.ವೆಂಕ ಟೇಶ್, ಗೊಂಗಡಿ ನಾಗರಾಜ್, ಎಚ್. ಕೊಟ್ರೇಶ್, ಲಾಟಿ ದಾದಪೀರ್,  ಉದ್ದಾರ್ ಗಣೇಶ್, ಮುಖಂಡರಾದ ಚಿಕ್ಕೇರಿ ಬಸಪ್ಪ, ಮಾಗನಹಳ್ಳಿ ಉದಯಶಂಕರ್ ಸೇರಿದಂತೆ  ಇತರರು ಇದ್ದರು.

error: Content is protected !!