ಪುನೀತ್ ರಾಜ್‍ಕುಮಾರ ಕಪ್‍ ಕ್ರಿಕೆಟ್ ಪಂದ್ಯಾವಳಿ ಉದ್ಘಾಟನೆ

ದಾವಣಗೆರೆ, ನ.21- ನಗರದ ಸ್ವೆಟ್ ಪಾರ್ಕ್ ಫಿಟ್ನೆಸ್ ವತಿಯಿಂದ `ಪುನೀತ್ ರಾಜ್‌ಕುಮಾರ್’ ಸ್ಮರಣಾರ್ಥ ಎರಡು ದಿನಗಳ ಕ್ರಿಕೆಟ್ ಪಂದ್ಯಾವಳಿಯು ಜಿಲ್ಲಾ ಕ್ರೀಡಾಂಗಣದಲ್ಲಿ ಇಂದು ಆರಂಭಗೊಂಡಿದೆ ಎಂದು ಸ್ವೆಟ್ ಪಾರ್ಕ್ ಫಿಟ್‌ನೆಸ್ ಮಾಲೀಕ ರೂಪಿತ್ ನಾಗರಾಜ್ ತಿಳಿಸಿದ್ದಾರೆ.

ಪಂದ್ಯಾವಳಿ ಉದ್ಘಾಟನೆಯನ್ನು ಪಾಲಿಕೆ ಸದಸ್ಯ ಮಂಜುನಾಥ ಗಡಿಗುಡಾಳ್, ಮಾಜಿ ಮೇಯರ್ ರೇಖಾ ನಾಗರಾಜ್, ಪಾಲಿಕೆ ಮಾಜಿ ಸದಸ್ಯ ದಿನೇಶ್ ಕೆ.ಶೆಟ್ಟಿ, ಜಿಲ್ಲಾ ಕಾಂಗ್ರೆಸ್‍ ಅಧ್ಯಕ್ಷ ಹೆಚ್‍.ಬಿ. ಮಂಜಪ್ಪ ಉದ್ಘಾಟಿಸಿದರು.

ಕ್ವಾಟರ್ ಫೈನಲ್ ತಲುಪಿದ್ದ ಒಟ್ಟು 4 ತಂಡಗಳಾದ ವಾರಿಯರ್ಸ್ ತಂಡ, ಸೂಪರ್ ಕಿಂಗ್ಸ್‍ ತಂಡ, ಡ್ರಾಗನ್ಸ್‍ ತಂಡ, ಡಿಪೆಂಡರ್ಸ್ ತಂಡಗಳು ನಾಳೆ ಸೆಮಿಫೈನಲ್ಸ್‍ ಆಡಲಿವೆ ಎಂದು  ರೂಪಿತ್ ನಾಗರಾಜ್ ವಿವರಿಸಿದ್ದಾರೆ.

ನಾಳೆ ದಿನಾಂಕ 23 ರ ಮಂಗಳವಾರ ಪಂದ್ಯಾವಳಿಯಲ್ಲಿ ವಿಜೇತರಾದವರಿಗೆ ಶಾಸಕ ಡಾ. ಶಾಮನೂರು ಶಿವಶಂಕರಪ್ಪ ಬಹುಮಾನ ವಿತರಿಸಲಿದ್ದಾರೆ. ಪಾಲಿಕೆ ವಿರೋಧ ಪಕ್ಷದ ನಾಯಕ ಎ. ನಾಗರಾಜ್ ತಿಳಿಸಿದ್ದಾರೆ.

error: Content is protected !!