ಕಳೆದ ಎರಡು ದಿನಗಳಿಂದ ನಗರವೂ ಸೇರಿದಂತೆ ಜಿಲ್ಲೆಯ ಹಲವೆಡೆ ಅಕಾಲಿಕ ಮಳೆ ಬೀಳುತ್ತಿದ್ದು, ಕಟಾವಿಗೆ ಬಂದ ಭತ್ತದ ಬೆಳೆಯನ್ನು ಆಹುತಿ ತೆಗೆದುಕೊಳ್ಳುವ ಮೂಲಕ ರೈತಾಪಿ ವರ್ಗವನ್ನು ಕಂಗಾಲಾಗಿಸಿದೆ. ಮತ್ತೊಂದೆಡೆ ನಗರದಲ್ಲಿ ಚೇತರಿಕೆ ಹಾದಿಯಲ್ಲಿದ್ದ ವ್ಯವಹಾರಗಳನ್ನು ಕುಂಠಿತಗೊಳಿಸಿದೆ. ಕೊರೊನಾದಿಂದ ಮುಚ್ಚಲ್ಪಟ್ಟಿದ್ದ ಶಾಲೆಗಳು ಇತ್ತೀಚೆಗಷ್ಟೇ ಆರಂಭವಾಗಿದ್ದು, ಮಕ್ಕಳು ಪಠ್ಯ ಪುಸ್ತಕಗಳನ್ನೇ ತಲೆ ಮೇಲೆ ಹೊತ್ತು ಸಾಗುತ್ತಿರುವ ದೃಶ್ಯ.
July 23, 2024