ಎಸ್.ಕೆ.ಪಿ. ದೇವಸ್ಥಾನ ನೇತೃತ್ವದಲ್ಲಿ ಕಿಟ್, ಟ್ಯಾಬ್‍, ಬ್ಲೂಟೂತ್, ವಿದ್ಯಾನಿಧಿ ವಿತರಣೆ

ದಾವಣಗೆರೆ, ಆ.8 – ಕರ್ನಾಟಕ ಆರ್ಯ ವೈಶ್ಯ ಮಹಾಸಭಾ ಜಿಲ್ಲಾ ಸಮಿತಿ, ಶ್ರೀ ಕನ್ಯಕಾ ಪರಮೇಶ್ವರಿ ದೇವಸ್ಥಾನ ಸಂಘ, ಸಿಂಷಾ ಫೌಂ ಡೇಶನ್, (ದಾವಣಗೆರೆ) ಇವರುಗಳ ಸಂಯುಕ್ತ ಆಶ್ರಯದಲ್ಲಿ ನಗರದ ಎಸ್.ಕೆ.ಪಿ. ರಸ್ತೆಯಲ್ಲಿರುವ ಶ್ರೀ ಕನ್ಯಕಾಪರಮೇಶ್ವರಿ ದೇವಸ್ಥಾನದಲ್ಲಿ ಉಚಿತ ದಿನಸಿ ಕಿಟ್ ಮತ್ತು ವಿದ್ಯಾರ್ಥಿಗಳಿಗೆ ಟ್ಯಾಬ್, ಬ್ಲೂ ಟೂತ್, ವಿದ್ಯಾನಿಧಿ ವಿತರಿಸಲಾಯಿತು.

ಶಾಸಕ ಡಾ. ಶಾಮನೂರು ಶಿವಶಂಕರಪ್ಪ, ಮಹಾಪೌರ ಎಸ್.ಟಿ.ವೀರೇಶ್, ಜಿಲ್ಲಾಧಿಕಾರಿ ಮಹಾಂತೇಶ್‌ ಬೀಳಗಿ ಅವರುಗಳು ಅರ್ಹರಿಗೆ 200 ಉಚಿತ ಕಿಟ್ ಮತ್ತು 25 ಟ್ಯಾಬ್, ಬ್ಲೂ ಟೂತ್, ವಿದ್ಯಾನಿಧಿ ವಿತರಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಎಸ್.ಕೆ.ಪಿ. ದೇವಸ್ಥಾನ ಸಂಘದ ಅಧ್ಯಕ್ಷ ಆರ್.ಎಲ್. ಪ್ರಭಾಕರ್‍ ವಹಿಸಿದ್ದರು.

ಟ್ಯಾಬ್ ದಾನಿಗಳಾದ ಗುಂಡಾಲ್ ಮಂಜುನಾಥ್, ವಿದ್ಯಾನಿಧಿ ದಾನಿಗಳಾದ
ಆರ್.ಜಿ. ಶ್ರೀನಿವಾಸಮೂರ್ತಿ, ಬ್ಲೂಟೂತ್ ದಾನಿಗಳಾದ ಅನಂತ ಶಯನ, ದೇವಸ್ಥಾನ ಸಂಘದ ಗೌರವಾಧ್ಯಕ್ಷ ಆರ್. ಎಸ್. ನಾರಾಯಣ ಸ್ವಾಮಿ, ಜಿಲ್ಲಾ ಸಮಿತಿಯ ಕಾರ್ಯದರ್ಶಿ ಎಂ. ನಾಗರಾಜ ಗುಪ್ತ ಅವರುಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು. 

ದೇವಸ್ಥಾನ ಸಂಘದ ಕಾರ್ಯಾಧ್ಯಕ್ಷ ಕಾಸಲ್ ಎಸ್. ಸತೀಶ್, ಸಹ ಕಾರ್ಯದರ್ಶಿ ಎ.ಎಸ್. ಸತ್ಯನಾರಾಯಣ ಸ್ವಾಮಿ, ನಿರ್ದೇಶಕರುಗಳಾದ  ಬಿ. ಪಿ. ನಾಗಭೂಷಣ್,  ಎಂ.ಕೆ. ನಾಗೇಂದ್ರ ಕುಮಾರ್, ಕಾಸಲ್ ವಿ. ಮಂಜುನಾಥ್, ಕೆ.ಆರ್. ಶ್ರೀಧರ್ ಬಾಬು, ಬಿ. ಸುರೇಶ್ ಎಂ. ಅಜ್ಜಯ್ಯ ಕುಮಾರ್, ರಂಗನಾಥ ಶೆಟ್ಟಿ, ವೈ.ಎಲ್. ಶ್ರೀನಿವಾಸ ಶೆಟ್ಟಿ, ಕೃಷ್ಣಮೂರ್ತಿ, ಯುವಜನ ಸಂಘದ ಅಧ್ಯಕ್ಷ  ಆರ್. ಎನ್. ಅಜಿತ್, ಬಿ.ಎನ್. ಸಾಯಿ ಪ್ರಸಾದ್, ಸತೀಶ್, ಮಹಾಸಭೆಯ ನಿರ್ದೇಶಕ ಬಿ. ಟಿ. ಅಶ್ವತ್ಥ್‍ ರಾಜ್ ಅವರುಗಳು ಸಮಾರಂಭದಲ್ಲಿ ಭಾಗವಹಿಸಿದ್ದರು.

ಎ.ಎಸ್. ಸತ್ಯನಾರಾಯಣಸ್ವಾಮಿ ಸ್ವಾಗತಿಸಿದರು. ಎಂ. ನಾಗರಾಜ ಗುಪ್ತ ವಂದಿಸಿದರು. ಗುಂಡಾಲ್ ಮಂಜುನಾಥ್ ಪ್ರಾಸ್ತಾವಿಕ ಭಾಷಣ ಮಾಡಿದರು.

error: Content is protected !!