ಭದ್ರಾದಿಂದ ನದಿಗೆ ನೀರು ಬಿಡುಗಡೆ

ಶಿವಮೊಗ್ಗ, ಆ.5- ಜೀವನಾಡಿ ಭದ್ರಾ ಜಲಾಶಯಕ್ಕೆ ಒಳ ಹರಿವು ಹೆಚ್ಚಾದ ಕಾರಣ ಗುರುವಾರ ಡ್ಯಾಮ್‌ನಿಂದ ಹೆಚ್ಚುವರಿ ನೀರನ್ನು ನದಿಗೆ ಬಿಡಲಾಯಿತು.

ಬೆಳಿಗ್ಗೆ 15206 ಕ್ಯೂಸೆಕ್ಸ್ ನೀರಿನ ಒಳಹರಿವು ಇದ್ದು, ಸಂಜೆ ನೀರಿನ ಮಟ್ಟ 184 ಅಡಿ 6 ಇಂಚು ಆಗಿದೆ. ಬೆಳಿಗ್ಗೆ ಜಲಾಶಯದ ನಾಲ್ಕು  ಕ್ರಸ್ಟ್‌ಗೇಟ್‌ಗಳನ್ನು ತೆರೆದು 1600 ಕ್ಯೂಸೆಕ್ಸ್ ನೀರನ್ನು ಬಿಡಲಾಗಿತ್ತು. ಸಂಜೆ ಹೊರ ಹೋಗುವ ನೀರಿನ ಪ್ರಮಾಣವನ್ನು 3200 ಕ್ಯೂಸೆಕ್ಸ್‌ಗೆ ಹೆಚ್ಚಿಸಲಾಯಿತು. ಕಳೆದ 4 ವರ್ಷಗಳಿಂದ ಸತತವಾಗಿ ಜಲಾಶಯ ಭರ್ತಿ ಯಾಗುತ್ತಿದ್ದು, ಅಚ್ಚುಕಟ್ಟಿನ ರೈತರ ಮೊಗದಲ್ಲಿ ಸಂತಸ ಕಾಣುತ್ತಿದೆ.

error: Content is protected !!