17ನೇ ವಾರ್ಡಿನಲ್ಲಿ 2ನೇ ಬಾರಿಗೆ ಎಸ್ಸೆಸ್‌ರಿಂದ ಉಚಿತ ಕೊರೊನಾ ಲಸಿಕಾ ಶಿಬಿರ

ದಾವಣಗೆರೆ, ಜೂ.27- ಹಿರಿಯ ಶಾಸಕ ಡಾ. ಶಾಮನೂರು ಶಿವಶಂಕರಪ್ಪ ಮತ್ತು ಮಾಜಿ ಸಚಿವ ಶಾಮನೂರು ಮಲ್ಲಿಕಾರ್ಜುನ್ ಅವರುಗಳು ಉಚಿತವಾಗಿ ನೀಡಿರುವ ಕೊರೊನಾ ಲಸಿಕೆ ನೀಡುವ ಶಿಬಿರವು 17ನೇ ವಾರ್ಡಿನಲ್ಲಿ  ಎರಡನೇ ಬಾರಿಗೆ ಪಿ.ಜೆ. ಬಡಾವಣೆಯ ಶ್ರೀ ರಾಘವೇಂದ್ರ ಸ್ವಾಮಿ ದೇವಸ್ಥಾನದಲ್ಲಿ ನಡೆಯಿತು. 18 ಮೇಲ್ಪಟ್ಟ ನಾಗರಿಕರಿಗೆ ಲಸಿಕೆ ನೀಡಲಾಯಿತು.

ಶ್ರೀ ರಾಘವೇಂದ್ರ ಸ್ವಾಮಿ ಮಠದ ಅಧ್ಯಕ್ಷ ಸುತೀರ್ಥ ಕಟ್ಟಿ, ಪಾಲಿಕೆ ಮಾಜಿ ಸದಸ್ಯ ದಿನೇಶ್ ಕೆ. ಶೆಟ್ಟಿ ಅವರುಗಳು ನಾಗರಿಕರಿಗೆ ಲಸಿಕೆ ಹಾಕಿಸುವುದರ ಮುಖಾಂತರ ಸಮಾರಂಭವನ್ನು ಉದ್ಘಾಟಿಸಿದರು.

ಕಾಂಗ್ರೆಸ್ ಮುಖಂಡರು ಗಳಾದ ಪಂಚಪ್ಪ ತೇರದಾಳ್, ವಾಟಾಳ್ ನಾಗ ರಾಜ್, ಮಠದ ಪದಾಧಿಕಾರಿ ಗಳಾದ ಗೋಪಾಲಾಚಾರ್, ಪ್ರಕಾಶ್ ನಾಡಿಗೇರ್, ಶಾಂತೇಶ್ ಗುತ್ತಲ್, ಬದ್ರೀಶ್ ದೇವಡೆ, ಶ್ರೀಧರ್ ಘಟಿಕರ್, ಸುಶೀಲೇಂದ್ರ ದೇವಡೆ, ಶಾಂತಮ್ಮ ದೇವಡೆ, ಸಮೀರ್ ದೇವಡೆ, ಯತಿರಾಜ್, ಮಾರುತಿ, ಎಂ.ಜಿ. ಶ್ರೀಕಾಂತ್, ಶ್ರೀಕಾಂತ್
ಬದ್ರಿ, ಅಶೋಕ್ ದೇವಡೆ, ಸುನಿಲ್, ವಿನೋದ್, ರಾಮು, ಶ್ರೀನಿವಾಸ್,  ಕಾಂಗ್ರೆಸ್ ಪಕ್ಷದ ವಾರ್ಡ್ ಮುಖಂಡರಾದ ವೆಂಕಟೇಶ್, ಶ್ರೀಕಾಂತ್ ಬಗರೆ, ಮಧು ಪವಾರ್, ಪರಶುರಾಮ್, ಪ್ರದೀಪ್ ಕನ್ನವರ್,
ಅಶು ಸಾವಂತ್, ಯುವರಾಜ್, ಗಂಗಾಧರ್,
ತರುಣ್ ಮುಂತಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

error: Content is protected !!