ಜನವಿರೋಧಿ ನೀತಿ ಖಂಡಿಸಿ ಪ್ರತಿಭಟನೆ

ಕೇಂದ್ರ-ರಾಜ್ಯ ಸರ್ಕಾರಗಳಿಗೆ ಕಣ್ಣು, ಕಿವಿ ಇಲ್ಲ : ಆನಂದರಾಜ್

ದಾವಣಗೆರೆ, ಜೂ.15 – ಆಳುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಕಣ್ಣು ಮತ್ತು ಕಿವಿ ಎರಡೂ ಇಲ್ಲ ಎಂದು ಸಿಪಿಐ ಜಿಲ್ಲಾ ಖಜಾಂಚಿ ಆನಂದರಾಜ್ ಕಿಡಿ ಕಾರಿದ್ದಾರೆ.

ಸಿಪಿಐ, ಸಿಪಿಐ (ಎಂ), ಎಸ್ ಯುಸಿಐ ಕಮ್ಯುನಿಸ್ಟ್ ಪಕ್ಷಗಳ ರಾಜ್ಯ ಸಮಿತಿ ಕರೆಯ ಮೇರೆಗೆ ಸರ್ಕಾರಗಳ ಜನ ವಿರೋಧಿ ನೀತಿ ವಿರೋಧಿಸಿ ಇಲ್ಲಿನ ಎಪಿಎಂಸಿ ಕಚೇರಿ ಮುಂಭಾಗದಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು.

ಸಿಪಿಐ ಜಿಲ್ಲಾ ಕಾರ್ಯದರ್ಶಿ ಆವರಗೆರೆ ಚಂದ್ರು ಮಾತನಾಡಿ, ರೈತರ ಫಸಲುಗಳ ಖರೀದಿ ಕೇಂದ್ರವನ್ನು ಸಮಯಕ್ಕೆ ಸರಿಯಾಗಿ ತೆರೆಯದೆ ಸರ್ಕಾರ ರೈತರಿಗೆ ವಂಚಿಸಿದೆ ಎಂದರು . 

ಸಿಪಿಐ ಎಂ ಜಿಲ್ಲಾ ಕಾರ್ಯದರ್ಶಿ ಕೆ.ಹೆಚ್. ಆನಂದರಾಜ್ ಮಾತನಾಡಿ, ಸರ್ಕಾರ ಕೋವಿಡ್ ವೈರಸ್‌ಗೆ ಔಷಧಿಯನ್ನು ಸರ್ಕಾರ ತಯಾರಿಸದೆ ಖಾಸಗಿ ಕಂಪನಿಗಳಿಗೆ ಲಸಿಕೆ ತಯಾರಿಸಲು ಅನುಮತಿ ನೀಡಿ ಖಾಸಗಿ ಕಂಪನಿಗಳ ಬೆಂಬಲಕ್ಕೆ ನಿಂತಿರುವುದು ನಾಚಿಕೆಗೇಡಿನ ವಿಷಯ ಎಂದರು. 

ಎಸ್‌ಯುಸಿಐ ಜಿಲ್ಲಾ ಕಾರ್ಯದರ್ಶಿ ಕೈದಾಳೆ ಮಂಜುನಾಥ್ ಮಾತನಾಡಿ, ಲಾಕ್ ಡೌನ್ ಹೆಸರಿನಲ್ಲಿ ದುಡಿಯುವ ಜನರನ್ನು, ರೈತರನ್ನು ಮನೆಯಲ್ಲಿ ಬಂಧಿಸಿಟ್ಟು ಅಗತ್ಯವಸ್ತುಗಳ ಬೆಲೆ ಏರಿಸಿ, ಬಂಡವಾಳಶಾಹಿಗಳಿಗೆ ನೆರವಾಗಿ ಸರ್ಕಾರ ಜನರಿಗೆ ದ್ರೋಹ ಎಸಗಿದ್ದು, ಇದೆಲ್ಲದರ ವಿರುದ್ಧ ಜನರನ್ನು, ಜಾಗೃತಿಗೊ ಳಿಸಬೇಕಾಗಿದೆ ಎಂದರು .

ಪ್ರತಿಭಟನೆಯನ್ನುದ್ದೇಶಿಸಿ ಸಿಪಿಐ ಜಿಲ್ಲಾ ಸಹ ಕಾರ್ಯದರ್ಶಿ ಹೆಚ್.ಜಿ. ಉಮೇಶ್, ಆವರಗೆರೆ ವಾಸು, ಸಿಪಿಐ (ಎಂ) ನ ಈ. ಶ್ರೀನಿವಾಸ್, ಎಸ್‌ಯುಸಿಐ ಭಾರತಿ ಮಾತನಾಡಿದರು. ಪ್ರತಿಭಟನೆಯಲ್ಲಿ ಎಡಪಕ್ಷಗಳ ಮುಖಂಡರುಗಳಾದ ಟಿ.ಎಸ್. ನಾಗರಾಜ್, ಐರಣಿ ಚಂದ್ರು, ಸರೋಜಾ, ಕೆ. ಶ್ರೀನಿವಾಸ್, ಕುಕ್ಕುವಾಡ ಮಂಜುನಾಥ, ನರೇಗಾ ರಂಗನಾಥ, ಗದಿಗೇಶ ಪಾಳ್ಯದ, ಮಹಮ್ಮದ್ ರಫೀಕ್ , ಭಾರತಿ, ಸೌಮ್ಯ, ದಾದಾಪೀರ್ ಸೇರಿದಂತೆ ಇತರರು ಭಾಗವಹಿಸಿದ್ದರು .

error: Content is protected !!