ಅಡಿಕೆ ವರ್ತಕರಿಂದ ಭದ್ರೆಗೆ ಬಾಗಿನ

ದಾವಣಗೆರೆ, ಆ.4- ಜಿಲ್ಲೆಯ ರೈತರ ಜೀವನಾಡಿಯಾದ ಭದ್ರಾ ಜಲಾಶಯವು ತುಂಬುವ ಹಂತದಲ್ಲಿದ್ದು, ನಗರದ ಎಪಿಎಂಸಿ ಅಡಿಕೆ ವರ್ತಕರೂ, ಎಪಿಎಂಸಿ ಮಾಜಿ ಅಧ್ಯಕ್ಷರೂ, ನೀರು ಬಳಕೆದಾರರ ಸಹಕಾರ ಮಹಾಮಂಡಳದ ನಿರ್ದೇಶಕರೂ ಆದ ಮುದೇಗೌಡ್ರು ಗಿರೀಶ್ ಅವರ ನೇತೃತ್ವದಲ್ಲಿ ಭದ್ರಾ ಜಲಾಶಯಕ್ಕೆ ಇಂದು ಭೇಟಿ ನೀಡಿ ಪೂಜೆ ಸಲ್ಲಿಸಿ, ಬಾಗಿನ ಅರ್ಪಿಸಿದರು.

ಈ ಸಂದರ್ಭದಲ್ಲಿ ಎಪಿಎಂಸಿ ಅಡಿಕೆ ವರ್ತಕರಾದ ರಾಮಗೊಂಡನಹಳ್ಳಿ ಜಯಣ್ಣ, ಬನಶಂಕರಿಯ ಶಂಕ್ರಣ್ಣ, ರಾಮಗೊಂಡನಹಳ್ಳಿ ಬಸವರಾಜ, ಬಾಡದ ಸೋಮಶೇಖರ್, ದೊಗ್ಗಳ್ಳಿ ಶಿವಕುಮಾರ್, ಕಾಕನೂರು ಅಜ್ಜಣ್ಣ, ಎಸ್.ಎನ್.ಟಿ.ತಿಪ್ಪೇಸ್ವಾಮಿ, ಬೇತೂರಿನ ಎಂ.ಷಡಕ್ಷರಪ್ಪ, ಎಂ.ಸತೀಶ್, ವಿಠಲಾಪುರದ ಕಿರಣ, ಹೂವಿನಮಡು ನಾಗರಾಜ್ ಮತ್ತಿತರರಿದ್ದರು.

error: Content is protected !!