ಸಾಮಾಜಿಕ ನ್ಯಾಯ ಕಲ್ಪಿಸಿದ್ದು ದೇವರಾಜ ಅರಸು

ಜಿಲ್ಲಾ ಕಾಂಗ್ರೆಸ್‍ನಿಂದ ನಡೆದ ಪುಣ್ಯಸ್ಮರಣೆಯಲ್ಲಿ ದೇವರಾಜ ಅರಸು ಸೇವೆ ಸ್ಮರಣೆ

ದಾವಣಗೆರೆ, ಜೂ.6- ಮಾಜಿ ಮುಖ್ಯಮಂತ್ರಿ ದಿ.ದೇವರಾಜ ಅರಸು ಅವರ ಪುಣ್ಯಸ್ಮರಣೆಯನ್ನು ಮಾಜಿ ಸಚಿವ ಶಾಮನೂರು ಮಲ್ಲಿಕಾರ್ಜುನ್ ಅವರ ಗೃಹ ಕಛೇರಿ `ಶಿವ ಪಾರ್ವತಿ’ಯಲ್ಲಿ ಸರಳವಾಗಿ ಆಚರಿಸಲಾಯಿತು.

ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ.ಶೆಟ್ಟಿ ಮಾತನಾಡಿ, 8 ವರ್ಷಗಳ ಕಾಲ ರಾಜ್ಯದ ಮುಖ್ಯಮಂತ್ರಿಗಳಾಗಿದ್ದ ದೇವರಾಜ ಅರಸು ಅವರು `ಸಮಪಾಲು ಸಮಬಾಳು’ ತತ್ವದಡಿ ಆಡಳಿತ ನಡೆಸಿ ಎಲ್ಲಾ ವರ್ಗದ ಜನತೆಗೆ ಅನುಕೂಲವಾಗುವಂತಹ ಯೋಜನೆಗಳನ್ನು ಜಾರಿಗೆ ತಂದರು ಎಂದು ಸ್ಮರಿಸಿದರು.

ಅರಸು ಅವರು, 12ನೇ ಶತಮಾನದಲ್ಲಿ ಬಸವಣ್ಣನವರು ಮಾಡಿದ ಸಾಮಾಜಿಕ ನ್ಯಾಯವನ್ನು  ಮುಂದುವರೆಸಿಕೊಂಡು ಹೋದ ಮಹನೀಯರು.  ಅವರು ಮುಖ್ಯಮಂತ್ರಿಯಾದಂತಹ ಸಂದರ್ಭದಲ್ಲಿ `ಜೀತ ಪದ್ದತಿ’, `ಉಳುವವನೇ ಭೂಮಿ ಒಡೆಯ’ ಎಂಬ ಕ್ರಾಂತಿಕಾರಿಕ ಮಸೂದೆಗಳನ್ನು ಜಾರಿ ಮಾಡಿದ್ದರು. ತಮ್ಮ ಜಮೀನನ್ನೂ ಸಹ ಹೂಳುವವನಿಗೆ ನೀಡುವ ಮೂಲಕ ಮಾದರಿಯಾಗಿದ್ದರು. ಶಾಮನೂರು ಶಿವಶಂಕರಪ್ಪನವರೊಂದಿಗೆ ನಿಕಟ ಸಂಪರ್ಕ ಹೊಂದಿದ್ದರು ಎಂದು ಹೇಳಿದರು.

ಪಾಲಿಕೆ ಸದಸ್ಯರುಗಳಾದ ಎ.ನಾಗರಾಜ್, ಕೆ.ಚಮನ್ ಸಾಬ್, ಜಾಕೀರ್, ಸೈಯದ್ ಚಾರ್ಲಿ, ಉದಯ್ ಕುಮಾರ್, ಮುಖಂಡರುಗಳಾದ ಶಫೀಕ್‌ ಪಂಡಿತ್, ಸೀಮೆಎಣ್ಣೆ ಪರಮೇಶ್, ಕೊಡಪಾನ ದಾದಾಪೀರ್, ಲಾಲ್ ಆರೀಫ್, ಶಾಮನೂರು ಕುಮಾರ್, ಹರೀಶ್ ಕೆ.ಎಲ್. ಬಸಾಪುರ, ಮೊಟ್ಟೆ ದಾದಾಪೀರ್ ಮತ್ತಿತರರಿದ್ದರು.

error: Content is protected !!