ಸೋಂಕಿತರ ತುರ್ತು ಚಿಕಿತ್ಸೆಗೆ ಕಾಂಗ್ರೆಸ್‌ನಿಂದ ಆಂಬ್ಯುಲೆನ್ಸ್

ಹೊನ್ನಾಳಿ ಮಾಜಿ ಶಾಸಕ ಡಿ.ಜಿ. ಶಾಂತನಗೌಡ

ಹೊನ್ನಾಳಿ, ಮೇ 28-  ತಾಲ್ಲೂಕು ಕಾಂಗ್ರೆಸ್ ಪಕ್ಷದ ವತಿಯಿಂದ ಕೊರೊನಾ ಸಂದರ್ಭದಲ್ಲಿ ಜನರ ಸೇವೆಗಾಗಿ ಒಂದು ಆಂಬುಲೆನ್ಸ್‍ನ್ನು ಸಮರ್ಪಿಸುತ್ತಿದ್ದೇವೆ ಎಂದು ಮಾಜಿ ಶಾಸಕ ಡಿ.ಜಿ. ಶಾಂತನಗೌಡ ತಿಳಿಸಿದ್ದಾರೆ.

ಅವರು  ಇಂದು  ಪಟ್ಟಣದ ಹಳೆ ಆಸ್ಪತ್ರೆಯ ಮುಂಭಾಗದಲ್ಲಿ ಆಂಬ್ಯುಲೆನ್ಸ್ ವಾಹನದ ಕೀಲಿಕೈಯನ್ನು ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಕೆಂಚಪ್ಪ ಅವರಿಗೆ ಹಸ್ತಾಂತರಿಸುವ ಮೂಲಕ ಕೋವಿಡ್ ಸೋಂಕಿತರನ್ನು ಗ್ರಾಮಗಳಿಂದ ತುರ್ತಾಗಿ ಕೇರ್ ಸೆಂಟರ್ ಹಾಗೂ ಆಸ್ಪತ್ರೆಗೆ ಕರೆ ತರಲು ಹಾಗೂ  ಬಡ ಜನರನ್ನು ತಮ್ಮ ಮನೆಗಳಿಗೆ ತಲುಪಿಸಲು ಈ ವಾಹನವನ್ನು ಆರೋಗ್ಯ ಇಲಾಖೆಗೆ  ನೀಡಲಾಗುತ್ತಿದೆ ಎಂದು ಹೇಳಿದರು.

ನಾಳೆ ದಿನಾಂಕ 29 ರ ಶನಿವಾರ ಬೆಳಗ್ಗೆ 11 ಗಂಟೆಗೆ  ಅವಳಿ ತಾಲ್ಲೂಕುಗಳ ಸುಮಾರು 250 ಆಶಾ ಕಾರ್ಯಕರ್ತೆಯರಿಗೆ ಮಾಸ್ಕ್ ಮತ್ತು ಸ್ಯಾನಿಟೈಜರ್‍ನೊಂದಿಗೆ ಆರೋಗ್ಯ ಕಿಟ್ ವಿತರಿಸಲಾಗುವುದು ಎಂದು ಹೇಳಿದರು.

ಈ ಸಂದರ್ಭದಲ್ಲಿ  ತಹಶೀಲ್ದಾರ್ ಬಸನಗೌಡ ಕೊಟೂರ,  ತಾ.ಪಂ. ಇ.ಒ. ಗಂಗಾಧರ ಮೂರ್ತಿ, ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಕೆಂಚಪ್ಪ  ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಚ್.ಬಿ. ಮಂಜಪ್ಪ, ಜಿ.ಪಂ. ಸದಸ್ಯ ವಿಶ್ವನಾಥ್ ಸಾಸ್ವೇಹಳ್ಳಿ ಬ್ಲಾಕ್‌ ಕಾಂಗ್ರೆಸ್ ಅಧ್ಯಕ್ಷ ಗದ್ದಿಗೇಶ್,  ಎಂ. ರಮೇಶ್, ರಂಜಿತ್, ಮನು ವಾಲಜ್ಜಿ, ಎ.ಜಿ. ಪ್ರಕಾಶ್, ವಿಜೇಂದ್ರಪ್ಪ, ರಾಜೀವ್, ದರ್ಶನ್ ಬಳ್ಳೇಶ್ವರ ಇನ್ನಿತರ ಮುಖಂಡರಿದ್ದರು.

error: Content is protected !!