12ರಿಂದ ಆನ್‍ಲೈನ್‌ನಲ್ಲಿ ಪದವಿ ತರಗತಿ

12ರಿಂದ ಆನ್‍ಲೈನ್‌ನಲ್ಲಿ ಪದವಿ ತರಗತಿ - Janathavaniದಾವಣಗೆರೆ ವಿವಿ ಕಾಲೇಜು ಪ್ರಾಚಾರ್ಯರ ಸಭೆಯಲ್ಲಿ ನಿರ್ಧಾರ

ದಾವಣಗೆರೆ, ಮೇ 6- ಕೋವಿಡ್-19ರ ಸಂದರ್ಭದಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಹಿನ್ನಡೆ ಆಗದಂತೆ ತಡೆಯುವ ಉದ್ದೇ ಶದಿಂದ ದಾವಣಗೆರೆ ವಿಶ್ವವಿದ್ಯಾನಿ ಲಯ ತನ್ನ ವ್ಯಾಪ್ತಿಯ ಚಿತ್ರದುರ್ಗ ಮತ್ತು ದಾವಣಗೆರೆ ಜಿಲ್ಲೆಗಳ ಎಲ್ಲ ಸ್ನಾತಕ ಪದವಿ ತರಗತಿಗಳಿಗೆ ಮೇ 12ರಿಂದ ಆನ್‍ಲೈನ್ ತರಗತಿ ಆರಂಭಿಸಲು ನಿರ್ಧರಿಸಿದೆ.

ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಶರಣಪ್ಪ ವಿ. ಹಲಸೆ ಅವರ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಪದವಿ ಕಾಲೇಜು ಪ್ರಾಚಾರ್ಯರ ಜೊತೆಗಿನ ಆನ್‍ಲೈನ್ ಸಭೆಯ ನಂತರ ಈ ನಿರ್ಧಾರ ಮಾಡಲಾಯಿತು.

ಈಗಾಗಲೇ ಪರೀಕ್ಷೆ ಮುಗಿದು 15 ದಿನಗಳಾಗಿದ್ದು, ವಿಶ್ರಾಂತಿ ನೀಡಿದಂತಾಗಿದೆ. ಇನ್ನೂ ಒಂದು ವಾರ ಮಾಹಿತಿ ನೀಡಿ ಮೇ 12ರಿಂದ ಆನ್‍ಲೈನ್ ತರಗತಿ ಆರಂಭಿಸಲಾ ಗುತ್ತದೆ. ಅದಕ್ಕೂ ಮುನ್ನ ಪ್ರಾಧ್ಯಾಪಕರೂ ಸಿದ್ಧತೆ ಮಾಡಿಕೊಳ್ಳಲು ಅವಕಾಶ ನೀಡಿದಂತಾಗುತ್ತದೆ ಎಂದು ತಿಳಿಸಿದರು.

ಪ್ರಸ್ತುತ ಪದವಿ ಪರೀಕ್ಷೆ ಮುಗಿದಿದ್ದರಿಂದ ವಿದ್ಯಾರ್ಥಿಗಳನ್ನು ಶೈಕ್ಷಣಿಕವಾಗಿ ತೊಡಗಿಸಿಕೊ ಳ್ಳುವುದು ಮುಖ್ಯವಾಗಿದೆ. ಅವರಿಗೆ ಆನ್‍ಲೈನ್ ಮೂಲಕ ಮುಂದಿನ ಸೆಮಿಸ್ಟರ್ ಅಂದರೆ ಎರಡು, ನಾಲ್ಕು ಮತ್ತು ಆರನೇ ಸೆಮಿಸ್ಟರ್ ಪಠ್ಯ ಪಾಠಗಳನ್ನು ಆರಂಭಿಸುವುದು ಮುಖ್ಯವಾಗಿದೆ. ಇದರಿಂದ ಅವರ ಶೈಕ್ಷಣಿಕ ಭವಿಷ್ಯ ಕ್ಕೂ ತೊಂದರೆ ಆಗುವುದಿಲ್ಲ. ವಿದ್ಯಾ ರ್ಥಿಗಳನ್ನು ಶೈಕ್ಷಣಿಕ ವಾತಾವರ ಣದಲ್ಲಿ ತೊಡಗಿಸಿಕೊಂಡರೆ ಅನಗತ್ಯವಾಗಿ ಆತಂಕಕ್ಕೆ ಅವಕಾಶ ಇರುವುದಿಲ್ಲ. ಅಲ್ಲದೆ ವಿದ್ಯಾರ್ಥಿಗಳ ನಿರಂತರ ಮೇಲ್ವಿಚಾರ ಣೆಗೂ ಸಹಕಾರ ಆಗಲಿದೆ ಎಂದು ನುಡಿದರು.

ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಆನ್‍ಲೈನ್‍ನಲ್ಲಿ ಪಾಠ ಕೇಳುವುದಕ್ಕೆ ತೊಂದರೆ ಯಾದರೆ ಪಠ್ಯಪೂರಕ ಮಾಹಿತಿಯನ್ನು ಲಭ್ಯವಿರುವ ಮಾಧ್ಯಮಗಳ ಮೂಲಕ ವಿದ್ಯಾರ್ಥಿಗಳಿಗೆ ತಲುಪಿಸ ಬೇಕು. ಅದಕ್ಕಾಗಿ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಅನು ಕೂಲವಾಗುವ ರೀತಿಯಲ್ಲಿ ವಾಟ್ಸ್‍ಆಪ್, ಇನ್‍ಸ್ಟಾ ಗ್ರಾಂ, ಗೂಗಲ್ ಕ್ಲಾಸ್ ರೂಂ ಅಥವಾ ಇನ್ನಿತರೆ ಮಾಧ್ಯಮಗಳಲ್ಲಿ ಗುಂಪು ರಚಿಸಿ ಪೂರಕ ಮಾಹಿತಿ ಒದಗಿಸಬೇಕು. ಯಾವುದೇ ವಿದ್ಯಾರ್ಥಿಯೂ ಶೈಕ್ಷಣಿಕವಾಗಿ ಹಿನ್ನಡೆ ಅನುಭವಿಸದಂತೆ ಗಮನ ನೀಡಬೇಕು ಎಂದು ಸೂಚಿಸಿದರು.

ಕಳೆದ ವರ್ಷದ ಅನುಭವ ಮತ್ತು ಸಮಸ್ಯೆಗಳನ್ನು ಗಮನಿಸಿ ಪರಿಹಾರ ಮಾರ್ಗ ಕಂಡುಕೊಳ್ಳಲು ಗಮನ ನೀಡಬೇಕು. ವಿದ್ಯಾರ್ಥಿ ಗಳ ಜೊತೆ ನಿರಂತರ ಸಂಪರ್ಕ ದಲ್ಲಿದ್ದು, ಅವರ ಚಲನವಲನ, ಆರೋಗ್ಯ ಹಾಗೂ ಶೈಕ್ಷಣಿಕ ಪ್ರಗತಿಯ ಸಂಪೂರ್ಣ ಮಾಹಿತಿ ಸಂಗ್ರಹಿಸಿ, ಪ್ರತಿ ವಾರಕ್ಕೊಮ್ಮೆ ಸಲ್ಲಿಸಲು ಎಲ್ಲ ಪ್ರಾಚಾರ್ಯ ರಿಗೂ ಸೂಚಿಸಲಾಗಿದೆ ಎಂದು ವಿವರಿಸಿದರು.

ಈಗಾಗಲೇ ವಿಶ್ವವಿದ್ಯಾನಿಲಯದ ಎಲ್ಲ ಪದವಿ ತರಗತಿಗಳ ಪರೀಕ್ಷೆಗಳು ಪೂರ್ಣಗೊಂಡಿವೆ. ಇದರಲ್ಲಿ ಶೇ. 90ರಷ್ಟು ವಿಷಯಗಳ ಮೌಲ್ಯಮಾಪನವೂ ನಡೆದಿದೆ. ಸ್ನಾತಕೋತ್ತರ ಪದವಿ ಮತ್ತು ಬಿ.ಎಡ್ ಪದವಿ ಪರೀಕ್ಷೆಗಳು ಬಾಕಿ ಇವೆ. ಅವುಗಳನ್ನು ನಡೆಸುವ ಸಂದ ರ್ಭದಲ್ಲಿ ಕೋವಿಡ್-19 ಹೆಚ್ಚಾಗಿ ಪರೀಕ್ಷೆ ಮುಂದೂಡ ಲಾಗಿದೆ ಎಂದು ಕುಲಪತಿ ಪ್ರೊ. ಹಲಸೆ ತಿಳಿಸಿದರು.

ಸಭೆಯಲ್ಲಿ ಕುಲಸಚಿವೆ ಪ್ರೊ. ಗಾಯತ್ರಿ ದೇವರಾಜ್, ಸಿಂಡಿಕೇಟ್ ಸದಸ್ಯರು, ಅಕಾ ಡೆಮಿಕ್ ಕೌನ್ಸಿಲ್ ಸದಸ್ಯರು, ವಿವಿಧ ಕಾಲೇ ಜುಗಳ ಪ್ರಾಚಾರ್ಯರು ಭಾಗವಹಿಸಿದ್ದರು.

error: Content is protected !!