ಹಳೇ ಅಂಡರ್ ಪಾಸ್‌ಗೆ ಮೇಯರ್‌ ವೀರೇಶ್ ಭೇಟಿ

ದಾವಣಗೆರೆ, ನ.11- ನಗರದ ಹಳೇ ಮತ್ತು ಹೊಸ ನಗರಕ್ಕೆ ಸಂಪರ್ಕ ಕಲ್ಪಿಸುವ ರೇಣುಕಾ ಮಂದಿರ ಪಕ್ಕ ಇರುವ ಎರಡನೇ ಅಂಡರ್‌ ಪಾಸ್‌ ಅನ್ನು  ಪಾಲಿಕೆ ಮಹಾಪೌರ ಎಸ್.ಟಿ. ವೀರೇಶ್‌ ವೀಕ್ಷಿಸಿ, ಅಲ್ಲಿನ ಸಮಸ್ಯೆಗಳನ್ನು ಆಲಿಸಿದರು.

ಬೀದಿ ದೀಪ, ಪೇವರ್‌  ಅಳವಡಿಕೆ, ಎಲ್ಲೆಂದರಲ್ಲಿ ಕಸ ನಿಯಂತ್ರಿಸಲು ಸಿ.ಸಿ. ಟಿವಿ ಅಳವಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.ಬಾರ್‌ಲೈನ್‌ ರಸ್ತೆಯಲ್ಲಿ ಚಿಕನ್‌ ಸೆಂಟರ್‌ಗಳಿಗೆ ಭೇಟಿ ನೀಡಿ, ಅಲ್ಲಿನ ತ್ಯಾಜ್ಯಗಳನ್ನು ಮಹಾನಗರ ಪಾಲಿಕೆ ತ್ಯಾಜ್ಯ ಸರಬರಾಜು ವಾಹನಗಳಿಗೆ ನೀಡಬೇಕು ಎಂದು ಮಾಲೀಕರಿಗೆ ತಿಳಿಸಿದರು.

ಈ ಸಂದರ್ಭದಲ್ಲಿ ಪಾಲಿಕೆ ಮಾಜಿ ಸದಸ್ಯರಾದ ಶಿವನಗೌಡ ಟಿ. ಪಾಟೀಲ, ಪಂಜು, ಈಶ್ವರ, ಪಿಸಾಳೆ ಶ್ರೀನಿವಾಸ್, ಶ್ರೀಕಾಂತ್‌ ನೀಲಗುಂದ, ರಮೇಶ್‌, ಬಸಪ್ಪ, ಪಾಲಿಕೆ ಅಧಿಕಾರಿಗಳಾದ ಉದಯ ಕುಮಾರ್ ಹಾಗು ಸ್ಥಳೀಯರು ಉಪಸ್ಥಿತರಿದ್ದರು.

error: Content is protected !!