ಜಿನ ಮಂದಿರದಲ್ಲಿ ಮಹಾವೀರ ಜಯಂತಿ

ದಾವಣಗೆರೆ, ಏ.25 – ನಗರದ ನರಸರಾಜ ರಸ್ತೆಯಲ್ಲಿರುವ ಪಾರ್ಶ್ವನಾಥ ದಿಗಂಬರ ಜೈನ ಮಂದಿರದಲ್ಲಿ ಅಹಿಂಸೆಯೇ ಪರಮ‌ಧರ್ಮ ಎಂದು ಇಡೀ ಜಗತ್ತಿಗೇ ಶಾಂತಿ ಸಾರಿದ ಭಗವಾನ್ ಮಹಾವೀರರ 2620ನೇ ಜನ್ಮ ಕಲ್ಯಾಣದ ಕಾರ್ಯಕ್ರಮವನ್ನು ಸ್ವಾಮಿಗೆ ಅಭಿಷೇಕ, ನಾಮಕರಣ ಹಾಗೂ ಮಂದಿರದಲ್ಲಿ ಪಲ್ಲಕ್ಕಿ ಉತ್ಸವವನ್ನು  ಇಂದು ಮುಂಜಾನೆ ಸರಳವಾಗಿ ನೆರವೇರಿಸಲಾಯಿತು. 

ಕಾರ್ಯಕ್ರಮದಲ್ಲಿ ದಿಗಂಬರ ಜೈನ ಸಮಾಜ,  ಮಹಾವೀರ ಯುವ ಮಂಚ್ ನ ಅಧ್ಯಕ್ಷರಾದ ಜಿತೇಂದ್ರ ಬೇತೂರ್, ಜಿನೇಶ್, ಮಹೇಂದ್ರ ಹೊಳಲು, ಸಂತೋಷ್ ಮಂಗಾಜ್, ವಿಜಯ್ ಕುಮಾರ್ ಎಸ್.ಬಿ. (ಜೈನ್), ಶ್ರಾವಕ, ಶ್ರಾವಕಿಯರು ಹಾಜರಿದ್ದರು.

error: Content is protected !!