ದಸರಾ: ಮಹಿಳಾ ಬೈಕ್ ರಾಲಿಗೆ ಸಂಸದ ಸಿದ್ದೇಶ್ವರ ಚಾಲನೆ

ದಾವಣಗೆರೆ, ಅ.10- ಸಾರ್ವಜನಿಕ ವಿಜಯದಶಮಿ ಮಹೋತ್ಸವದ ಅಂಗವಾಗಿ ವಿಶ್ವ ಹಿಂದೂ ಪರಿಷದ್ ಮತ್ತು ಸಾರ್ವಜನಿಕ ವಿಜಯದಶಮಿ ಮಹೋತ್ಸವ ಸಮಿತಿ ಹಾಗೂ ಹಿಂದೂ ಜಾಗರಣ ವೇದಿಕೆ ಇವರುಗಳ ಸಂಯುಕ್ತಾಶ್ರಯದಲ್ಲಿ ಇಂದು ಏರ್ಪಡಿಸಿದ್ದ ಮಹಿಳಾ ಮೋಟಾರ್ ಬೈಕ್ ರಾಲಿಗೆ  ಹರಳೆಣ್ಣೆ ಕೊಟ್ರಬಸಪ್ಪ ವೃತ್ತದಲ್ಲಿ ಶನಿವಾರ ಸಂಸದ ಜಿ.ಎಂ. ಸಿದ್ದೇಶ್ವರ ಚಾಲನೆ ನೀಡಿದರು. 

ನಗರ ಪಾಲಿಕೆ ಮೇಯರ್ ಎಸ್.ಟಿ. ವೀರೇಶ್, ದೂಡಾ ಅಧ್ಯಕ್ಷ ದೇವರಮನೆ ಶಿವಕುಮಾರ್, ಪಾಲಿಕೆ ನಾಮನಿರ್ದೇಶಿತ ಸದಸ್ಯರಾದ  ಶಿವನಗೌಡ ಟಿ. ಪಾಟೀಲ್, ಕು.ಹೆಚ್.ಸಿ. ಜಯಮ್ಮ, ಸಾರ್ವಜನಿಕ ವಿಜಯದಶಮಿ ಮಹೋತ್ಸವದ ಸಂಚಾಲಕ  ಸತೀಶ್ ಪೂಜಾರಿ,  ಟಿಂಕರ್ ಮಂಜಣ್ಣ, ಗೋಪಾಲರಾವ್ ಸಾವಂತ್, ಜೊಳ್ಳಿ ಗುರು, ರಾಜು ಬೇಕರಿ, ಪ್ರಕಾಶ್ ತೇಲ್ಕರ್ ಹಾಗೂ ಇತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

error: Content is protected !!