ಶಾಸಕ ರೇಣುಕಾಚಾರ್ಯ ಗಡೀಪಾರಿಗೆ ಬಿಎಸ್‍ಪಿ ಆಗ್ರಹ

ದಾವಣಗೆರೆ, ಮಾ.28- ಬೇಡ ಜಂಗಮ ಜಾತಿ ಪ್ರಮಾಣ ಪತ್ರ ಪಡೆದಿ ರುವ ಶಾಸಕ ಎಂ.ಪಿ ರೇಣುಕಾಚಾರ್ಯ ಅವರನ್ನು ವಿಧಾನಸಭಾ ಸದಸ್ಯತ್ವದಿಂದ ವಜಾಗೊಳಿಸಬೇಕೆಂದು ಆಗ್ರಹಿಸಿ, ಬಹುಜನ ಸಮಾಜ ಪಕ್ಷದಿಂದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ಇದೇ ವೇಳೆ ಮಾತನಾಡಿದ ಪಕ್ಷದ ಜಿಲ್ಲಾಧ್ಯಕ್ಷ ಹೆಚ್. ಮಲ್ಲೇಶ್, ಹುಟ್ಟಿ ನಿಂದ ಹಿಂದೂ ಲಿಂಗಾಯತ ಜಂಗಮ ರಾಗಿ, ರಾಜಕಾರಣಕ್ಕಾಗಿ ಹಾಗೂ ಸರ್ಕಾರಿ ಸೌಲಭ್ಯಕ್ಕಾಗಿ ಬೇಡ ಜಂಗಮರು ಎಂದು ಎಂ.ಪಿ ರೇಣುಕಾ ಚಾರ್ಯ ಹಾಗೂ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಬಿ.ಎಂ. ವಾಗೀಶಸ್ವಾಮಿ ನಕಲಿ ಪ್ರಮಾಣ ಪತ್ರ ಪಡೆದು ಪರಿಶಿಷ್ಟರಿಗೆ ಅನ್ಯಾಯ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬೇಡ ಜಂಗಮರು ಕೆಟಗರಿ 3ಎ ನಲ್ಲಿ ಬರುತ್ತಾರೆ. ಬೇಡ ಜಂಗಮರು ವೀರಶೈವ ಜಂಗಮರಲ್ಲ. ಅವರೆಲ್ಲ ಆಂಧ್ರ ಮೂಲದಿಂದ ವಲಸೆ ಬಂದಿದ್ದು, ಅವರು ಮಾದಿಗ ಅಥವಾ ಹೊಲೆಯ ಜಾತಿ ಜನರಿಗೆ ಮಾತ್ರ ಧರ್ಮಗುರುಗಳು. ಆದರೆ ಈಗ ನಕಲಿ ಪ್ರಮಾಣ ಪತ್ರ ಪಡೆದು ಪರಿಶಿಷ್ಟರ ಸೌಲಭ್ಯ ಕಿತ್ತುಕೊಳ್ಳಲು ಹುನ್ನಾರ ನಡೆಸಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಎಂ.ಪಿ. ರೇಣುಕಾಚಾರ್ಯ ಹುಟ್ಟಿನಿಂದ ಲಿಂಗಾಯತರು. ಆದರೆ, ಅವರಿಗೆ ಜನಿಸಿದ ಮಗಳು ಎಂ.ಆರ್ . ಚೇತನ ಅಸ್ಪೃಶ್ಯ ಜಾತಿಯ ನಕಲಿ ಬೇಡ ಜಂಗಮಳಾಗಿದ್ದು ಹೇಗೆ? ಅವರ ಮಗ ಅಮೇರಿಕದಲ್ಲಿದ್ದು ಲಿಂಗಾಯತ ತಂದೆಯ ಮಗನಾದ ಹಾಗೂ ರೇಣುಕಾಚಾರ್ಯರ ಸಹೋದರ ದ್ವಾರಕಾನಾಥಯ್ಯ ನಕಲಿ ಬೇಡ ಜಂಗಮರಾಗಿದ್ದು ಹೇಗೆ? ಎಂದು ಪ್ರಶ್ನಿಸಿದರು.

ಬೇಡ ಜಂಗಮ ವಂಶದವರಾದ ಮಲೇಬೆನ್ನೂರಿನ ವಾಗೀಶ್‌ಸ್ವಾಮಿ ಅವರು ಜಿಲ್ಲಾ ಪಂಚಾಯತ್ ಕ್ಷೇತ್ರದಲ್ಲಿ ಸ್ಪರ್ಧಿಸುವಾಗ ಲಿಂಗಾಯತನೆಂದು ಸಾಮಾನ್ಯ ಕ್ಷೇತ್ರದಲ್ಲಿ ಜಯ ಗಳಿಸಿದ್ದು, ಈಗ ಮಾಯಾಕೊಂಡ ವಿಧಾನಸಭಾ ಕ್ಷೇತ್ರಕ್ಕೆ ಸ್ಪರ್ಧಿಸಲು ಬೇಡಜಂಗಮ ನೆಂದು ಹೇಳಿಕೊಂಡು ಅಸ್ಪೃಶ್ಯ ಸಮುದಾಯದವರಿಗೆ ಇರುವ ಒಂದು ಕ್ಷೇತ್ರವನ್ನು ಕೂಡ ಕಸಿದುಕೊಳ್ಳುವ ಹುನ್ನಾರ ನಡೆಸಿದ್ದಾರೆ. ಆದ್ದರಿಂದ ರೇಣುಕಾಚಾರ್ಯ ಕುಟುಂಬ ಮತ್ತು ವಾಗೀಶ ಸ್ವಾಮಿಯ ಬೇಡ ಜಂಗಮ ಸರ್ಟಿಫಿಕೆಟನ್ನು ರದ್ದುಪಡಿಸಬೇಕು.ಎಂ.ಪಿ. ರೇಣುಕಾಚಾರ್ಯರನ್ನು ಪರಿಶಿಷ್ಟರ ದೌರ್ಜನ್ಯ ಕಾಯ್ದೆಯಡಿ ಬಂಧಿಸಿ, ರಾಜ್ಯದಿಂದಲೇ ಗಡಿಪಾರು ಮಾಡಬೇಕೆಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಎಂ. ಚಂದ್ರಪ್ಪ, ಕರಿಬಸಪ್ಪ, ಪರಶುರಾಮ್, ಚನ್ನಬಸಪ್ಪ, ಮೈಲಾರಪ್ಪ, ಶಾಂತಪ್ಪ, ಹೆಚ್. ಸುಜಾತ ಮತ್ತಿತರರು ಹಾಜರಿದ್ದರು.

error: Content is protected !!