ರಕ್ತ ನಿಧಿ ಕೇಂದ್ರ, ವಿಭಜಕ ಘಟಕಗಳ ಉದ್ಘಾಟನೆ

ದಾವಣಗೆರೆ, ಮಾ. 27 – ನಗರದ ಶಾಮನೂರು ಶಿವಶಂಕರಪ್ಪ ರೆಡ್ ಕ್ರಾಸ್ ಭವನದ ಆವರಣದಲ್ಲಿ ರೆಡ್ ಕ್ರಾಸ್ ರಕ್ತನಿಧಿ ಕೇಂದ್ರವನ್ನು ಭಾನುವಾರ ಉದ್ಘಾಟಿಸಲಾಯಿತು.

ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಅವರು ರಕ್ತನಿಧಿ ಕೇಂದ್ರ ಉದ್ಘಾಟಿಸಿದರು. ಸಂಸದ ಜಿ.ಎಂ. ಸಿದ್ದೇಶ್ವರ ಅವರು ರಕ್ತ ವಿಭಜಕ ಘಟಕದ ಉದ್ಘಾಟನೆ ನೆರವೇರಿಸಿದರು. ಶಾಸಕ ಎಸ್.ಎ. ರವೀಂದ್ರನಾಥ್ ಆಂಬುಲೆನ್ಸ್ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ರೆಡ್ ಕ್ರಾಸ್ ಸಭಾಪತಿ ಡಾ. ಎ.ಎಂ. ಶಿವಕುಮಾರ್, ವೈಸ್ ಛೇರ್ಮನ್ ಗೌಡ್ರು ಚನ್ನಬಸಪ್ಪ, ಡಿ.ಎಸ್. ಸಿದ್ದಣ್ಣ, ಪ್ರಧಾನ ಕಾರ್ಯದರ್ಶಿ ಉಮೇಶ್ ಶೆಟ್ಟಿ, ಕಾರ್ಯದರ್ಶಿ ಡಿ.ಎಸ್. ಸಾಗರ, ಖಜಾಂಚಿ ಅನಿಲ್ ಬಾರೆಂಗಳ್, ನಿರ್ದೇಶಕರಾದ ಡಾ. ಮಹೇಶ್ ಕರಿಯಪ್ಪ, ಹೆಚ್.ಮಂಜುನಾಥ, ಡಾ. ಎ.ಎಂ. ಶಿಲ್ಪಶ್ರೀ, ಮಹಮ್ಮದ್ ಇನಾಯತ್‌ವುಲ್ಲಾ, ಎನ್.ವಿ. ವಸಂತರಾಜು, ಡಿ.ಎನ್. ಶಿವಾನಂದ, ಎ.ಜೆ. ರವಿಕುಮಾರ್, ಕೆ.ಕೆ. ನಾಗರಾಜ್, ಶ್ರೀಕಾಂತ್ ಬಗರೆ, ಎಂ.ಎಸ್. ನರೇಂದ್ರ ಪ್ರಕಾಶ, ಪೃಥ್ವಿರಾಜ್‌ ಬಾದಾಮಿ, ಎಂ.ಕುಮಾರ್ , ಡಾ. ಬಿ.ವಿ.ಧನಂಜಯಮೂರ್ತಿ, ಟಿ. ಕರಿಬಸವಪ್ಪ ಮತ್ತಿತರರು ಉಪಸ್ಥಿತರಿದ್ದರು.

error: Content is protected !!