ಜಿಲ್ಲೆಯ ಕಾಂಗ್ರೆಸ್ ಸದಸ್ವತ್ವ ಅಭಿಯಾನದಲ್ಲಿ ಹೊನ್ನಾಳಿ ಪ್ರಥಮ

ಹೊನ್ನಾಳಿ, ಮಾ. 21- ಕಾಂಗ್ರೆಸ್ ಪಕ್ಷದ ಕೆಲಸವನ್ನು ನಿಮ್ಮ ಮನೆಯ ಕೆಲಸವೆಂದು ತಿಳಿದು, 224 ಬೂತ್‍ಗಳಲ್ಲಿ 50 ಸಾವಿರಕ್ಕೂ ಹೆಚ್ಚು ಸದಸ್ಯತ್ವದ ಗುರಿ ದಾಟಬೇಕು ಎಂದು ಕಾಂಗ್ರೆಸ್ ಕಾರ್ಯಕರ್ತರಿಗೆ ಮಾಜಿ ಶಾಸಕ ಡಿ.ಜಿ. ಶಾಂತನಗೌಡ ಕರೆ ನೀಡಿದರು.

ಪಟ್ಟಣದ ಖಾಸಗಿ ಸಭಾಂಗಣದಲ್ಲಿ ಕಾಂಗ್ರೆಸ್ ಸದಸ್ಯತ್ವ ನೋಂದಣಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಪಕ್ಷದ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಸದಸ್ಯತ್ವ ಅಭಿಯಾನ ವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪಕ್ಷದ ಕಾರ್ಯಕರ್ತರು, ಮುಖಂಡರು ಸದಸ್ಯತ್ವ ಅಭಿಯಾನವನ್ನು ತಮ್ಮ ಸ್ವಂತ ಕೆಲಸವೆಂದು ಪರಿಗಣಿಸಿ, ತಮ್ಮ ತಮ್ಮ ಬೂತ್‍ಗಳಲ್ಲಿ ಕನಿಷ್ಟ 250 ಸದಸ್ಯರನ್ನು ನೋಂದಣಿ ಮಾಡಿಸುವಂತೆ ಮನವಿ ಮಾಡಿದರು.

ಪಕ್ಷ ನಿಷ್ಠೆ ಅತ್ಯಂತ ಮಹತ್ವದ್ದು. ಪಕ್ಷವಿದ್ದರೆ ನಾವೆಲ್ಲರೂ ಅಧಿಕಾರ ಅನುಭವಿಸುತ್ತೇವೆ. ತಾಲ್ಲೂಕಿನಲ್ಲಿ ರಾಜಕಾರಣ ಮಾಡಲು ಸಾಧ್ಯವಾಗುತ್ತದೆ. ಅದನ್ನು ನಮ್ಮ ಕಾರ್ಯಕರ್ತರು ಮರೆಯಬಾರದು. ಸದಸ್ಯತ್ವ ಅಭಿಯಾನ ಜಿಲ್ಲೆಗೆ ಮಾದರಿಯಾಗಬೇಕು ಎಂದರು.

ಮುಖಂಡ ಎಂ.ಸಿದ್ದಪ್ಪ ಮಾತನಾಡಿ, ಪಕ್ಷದ ಮುಖಂಡರಲ್ಲಿ ಮತ್ತು ಕಾರ್ಯಕರ್ತರ ನಡುವೆ ಅಂತರ ಕಡಿಮೆಯಾಗುತ್ತಿರು ವುದರಿಂದ ಪಕ್ಷದ ವತಿ ಯಿಂದ ಸದಸ್ಯತ್ವ ಅಭಿ ಯಾನ ಆರಂಭವಾಗಿದೆ. ಈ ಮೂಲಕ ಪಕ್ಷದ ಕಾರ್ಯ ಕರ್ತರ ಕುಂದುಕೂರತೆ ಅಲಿಸುವ ಮೂಲಕ ಅವರ ಕಷ್ಟಗಳನ್ನು ಬಗೆಹರಿಸಿಕೊಳ್ಳಬಹುದಾಗಿದೆ ಎಂದರು.

ಮುಖಂಡ ಡಾ. ಈಶ್ವರನಾಯ್ಕ್ ಮಾತನಾಡಿದರು.ಸಭೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಣ್ಣಕ್ಕಿ ಬಸವನ ಗೌಡ, ಜಿ.ಪಂ. ಮಾಜಿ ಸದಸ್ಯ ಡಿ.ಜಿ. ವಿಶ್ವ ನಾಥ್, ಡಾ.ಈಶ್ವರ ನಾಯ್ಕ್, ಆರ್. ನಾಗಪ್ಪ, ಜಿಲ್ಲಾ ಯುವ ಕಾಂಗ್ರೆಸ್  ಉಪಾಧ್ಯಕ್ಷ ರಂಜಿತ್, ದಿಡಗೂರು ಪ್ರಕಾಶ್, ಎಂ.ರಮೇಶ್, ಚೀಲೂರು ವಾಜೀದ್, ನುಚ್ಚಿನ ವಾಗೀಶ್, ಪ್ರದೀಪ್‍ಗೌಡ ಹಾಗು ಇತರರು ಇದ್ದರು.

error: Content is protected !!