ಹಿಜಾಬ್ ತೀರ್ಪಿನ ವಿರುದ್ಧ ಮಲೇಬೆನ್ನೂರಿನಲ್ಲಿ ವ್ಯಾಪಾರ ಬಂದ್

ಮಲೇಬೆನ್ನೂರು, ಮಾ. 17- ಹಿಜಾಬ್‌ಗೆ ಸಂಬಂಧಿಸಿದಂತೆ ಹೈಕೋರ್ಟ್ ನೀಡಿರುವ ತೀರ್ಪಿನ ಬಗ್ಗೆ ಬೇಸರ ವ್ಯಕ್ತಪಡಿಸಿ ಅಮೀರ್-ಇ-ಶರಿಯ್ಯ ಕರೆ ನೀಡಿದ್ದ ಕರ್ನಾಟಕ ಬಂದ್‌ ಬೆಂಬಲಿಸಿ, ಪಟ್ಟಣದಲ್ಲೂ ಮುಸ್ಲಿಂ ಸಮಾಜದವರು ವ್ಯಾಪಾರ-ವಹಿವಾಟು ಬಂದ್ ಮಾಡುವ ಮೂಲಕ ಬೆಂಬಲ ವ್ಯಕ್ತಪಡಿಸಿದರು.

ಅಲ್ಲದೇ ಪಟ್ಟಣದಲ್ಲಿರುವ ಮುಸ್ಲಿಂ ಸಮಾಜದ ವಿದ್ಯಾಸಂಸ್ಥೆಗಳನ್ನು ಬಂದ್ ಮಾಡಿ, ಸಂವಿಧಾನದ ಆಶಯದ ವಿರುದ್ಧ ಹೈಕೋರ್ಟ್ ತೀರ್ಪು ನೀಡಿರುವುದು ಬೇಸರ ತಂದಿದೆ ಎಂದು ಮುಖಂಡರು ಅಭಿಪ್ರಾಯ ವ್ಯಕ್ತಪಡಿಸಿದರು.

ಮುಸ್ಲಿಂ ಸಮಾಜದವರ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿದ್ದರಿಂದ ಪಟ್ಟಣದಲ್ಲಿ ಒಂದು ರೀತಿ ಅಘೋಷಿತ ಬಂದ್ ವಾತಾವರಣ ನಿರ್ಮಾಣವಾಗಿತ್ತು. ಶಾಂತಿಯುತವಾಗಿದ್ದರೂ ಮೌನ ಪ್ರತಿಭಟನೆ ಕಂಡು ಬಂತು. ಪಿಎಸ್ಐ ರವಿಕುಮಾರ್ ನೇತೃತ್ವದಲ್ಲಿ ಪಟ್ಟಣದಲ್ಲಿ ಸೂಕ್ತ ಬಂದೋಬಸ್ತ್ ಕೈಗೊಳ್ಳಲಾಗಿತ್ತು.

error: Content is protected !!