39ನೇ ವಾರ್ಡ್ : ಕಾಮಗಾರಿಗಳ ವೀಕ್ಷಣೆ

ದಾವಣಗೆರೆ, ಮಾ.11- 39ನೇ ವಾರ್ಡಿನ ವಿದ್ಯಾನಗರದ 5ನೇ ಕ್ರಾಸ್‌ನಲ್ಲಿ ನಡೆಯುತ್ತಿರುವ ವಿವಿಧ ಕಾಮಗಾರಿಗಳನ್ನು ಪಾಲಿಕೆ ಆಯುಕ್ತ ವಿಶ್ವನಾಥ ಪಿ.ಮುದಜ್ಜಿ ಹಾಗೂ ಪಾಲಿಕೆ ಸದಸ್ಯರಾದ ಶ್ರೀಮತಿ ಗೀತಾ ದಿಳ್ಯಪ್ಪ ಅವರುಗಳು ಅಭಿವೃದ್ಧಿ ಕಾಮಗಾರಿಗಳನ್ನು ಪರಿಶೀಲಿಸಿದರು.

ಈ ಸಂದರ್ಭದಲ್ಲಿ ಅಧೀಕ್ಷಕ ಅಭಿಯಂತರ ಮಂಜುನಾಥ್, ಸಹಾಯಕ ಕಾರ್ಯಪಾಲಕ ಅಭಿಯಂತರ ಅನುಪ್, ಸಹಾಯಕ ಅಭಿಯಂತರರಾದ ಜಯಲಕ್ಷ್ಮಿ, ಬಿಜೆಪಿ ಮುಖಂಡರಾದ ವಿನಯ್ ದಿಳ್ಯಪ್ಪ, ಸಿದ್ದೇಶ್, ಪಿ.ಎಂ.ಸಿ.ಕಾರ್ತಿಕ್, ಅರುಣ್ ನಂಜಪ್ಪ ಮತ್ತಿತರರು ಉಪಸ್ಥಿತರಿದ್ದರು.

error: Content is protected !!