ಹರಿಹರದಲ್ಲಿ ಬಿಜೆಪಿ ವಿಜಯೋತ್ಸವ

ಹರಿಹರ, ಮಾ.10- ಪಂಚ ರಾಜ್ಯ ಚುನಾವಣೆಯಲ್ಲಿ ಬಿಜೆಪಿ ನಾಲ್ಕು ರಾಜ್ಯಗಳಲ್ಲಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಬಿಜೆಪಿ ನಗರ ಘಟಕದ ವತಿಯಿಂದ ರಾಣಿ ಚೆನ್ನಮ್ಮ ವೃತ್ತದಲ್ಲಿ ಪಟಾಕಿ ಸಿಡಿಸಿ, ಸಹಿ ಹಂಚಿ ವಿಜಯೋತ್ಸವ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಅಧ್ಯಕ್ಷ ವೀರೇಶ್ ಹನಗವಾಡಿ, ನಗರ ಘಟಕ ಅಧ್ಯಕ್ಷ ಅಜಿತ್ ಸಾವಂತ್, ಪ್ರಧಾನ ಕಾರ್ಯದರ್ಶಿ ಹೆಚ್.ಮಂಜನಾಯ್ಕ, ಮಹಿಳಾ ಮೋರ್ಚಾ ಅಧ್ಯಕ್ಷರಾದ ಅಶ್ವಿನಿ ಕೃಷ್ಣ, ಜಿಲ್ಲಾ ಕಾರ್ಯದರ್ಶಿ ರೂಪ ಕಾಟ್ವೆ, ಮುಖಂಡರಾದ ತುಳಜಪ್ಪ ಭೂತೆ, ಮಂಜಣ್ಣ ನಲ್ಲಿ, ರಾಜು ಆಟೋ, ಸುರೇಶ್ ತೆರದಾಳ್, ಹೆಚ್. ಎಸ್. ರಾಘವೇಂದ್ರ, ಮಾಲತೇಶ್ ಭಂಡಾರಿ, ಶಾಂತರಾಜ್, ಸುನೀಲ್ ಕುಮಾರ್, ಗೀರೀಶ್, ಅದ್ವೈತ ಶಾಸ್ತ್ರಿ, ಚಂದ್ರಕಾಂತ್, ಪ್ರವೀಣ್ ಪವಾರ್, ಸಾಕ್ಷಿ ಸಿಂದೆ ಮತ್ತಿತರರು ಉಪಸ್ಥಿತರಿದ್ದರು.

error: Content is protected !!