ಹರಪನಹಳ್ಳಿಯಲ್ಲಿ ಬಿಜೆಪಿ ಸಂಭ್ರಮಾಚರಣೆ

ಹರಪನಹಳ್ಳಿ, ಮಾ. 10- ಪಂಚರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ ಜಯಭಾರಿ ಬಾರಿಸಿದ ಹಿನ್ನೆಲೆ ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಸತ್ತೂರು ಹಾಲೇಶ ನೇತೃತ್ವದಲ್ಲಿ ಪಟ್ಟಣದ ಐಬಿ ವೃತ್ತದಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಲಾಯಿತು.

ಈ ವೇಳೆ ಜಿಲ್ಲಾ ಬಿಜೆಪಿ ಎಸ್ಟಿ ಘಟಕದ ಕಾರ್ಯದರ್ಶಿ ಆರ್. ಲೋಕೇಶ, ತಾಲ್ಲೂಕು ಬಿಜೆಪಿ ಘಟಕದ ಉಪಾಧ್ಯಕ್ಷ ನಿಟ್ಟೂರು ಸಣ್ಣಹಾಲಪ್ಪ, ತಾ. ಬಿಜೆಪಿ ಎಸ್ಟಿ ಮೋರ್ಚಾದ ಅಧ್ಯಕ್ಷ ನೀಲಗುಂದ ಟಿ. ಮನೋಜ್, ತಾ.ಪಂ. ಮಾಜಿ ಉಪಾಧ್ಯಕ್ಷ ಮಂಜನಾಯ್ಕ, ಮಾಜಿ ಸದಸ್ಯ ಮಲ್ಲೇಶ ನಾಯ್ಕ, ಪುರಸಭೆ ಸದಸ್ಯ ಎಂ.ಕೆ. ಜಾವೀದ್, ಮುಖಂಡ ರಾದ ಎಂ.ಪಿ. ನಾಯ್ಕ, ಕಣವಿ ಹಳ್ಳಿ ಮಂಜಣ್ಣ, ರಂಗಾ ಪುರದ ಪಕ್ಕೀರಪ್ಪ, ದಾದಾಪುರ ಶಿವಾನಂದ, ನಂದಿಬೇ ವೂರು ರಾಜಪ್ಪ, ಆಲೂರು ಶ್ರೀನಿವಾಸ, ವೆಂಕಟೇಶ ನಾಯ್ಕ, ಲಿಂಬ್ಯಾನಾಯ್ಕ, ದ್ಯಾಪನಳ್ಳಿ ಜಿ.ಕೆ. ಬಸವರಾಜ, ರೇಖಮ್ಮ, ಗುಂಡಿ ಮಂಜುನಾಥ, ಜೋಗಿ ಬಸವರಾಜ, ಕಣಿವಿಹಳ್ಳಿ ಮಾರುತಿ, ಕಡತಿ ರಮೇಶ್, ಬಿದ್ದಪ್ಪ, ಕೊಟ್ರಯ್ಯ, ಹರಿಯಮ್ಮನವಹಳ್ಳಿ ಮಂಜುನಾಥ ಉಪಸ್ಥಿತರಿದ್ದರು.

error: Content is protected !!