ದೂಡಾ ಅಧ್ಯಕ್ಷರಿಂದ ಪ್ರಗತಿಯ ಕಾಮಗಾರಿ ವೀಕ್ಷಣೆ

ದಾವಣಗೆರೆ, ಮಾ. 9- ಎಸ್.ಎಸ್.ಲೇಔಟ್ `ಬಿ’ ಬ್ಲಾಕ್ ನಲ್ಲಿ ನಡೆಯತ್ತಿರುವ ಡಾಂಬರೀಕರಣದ ಕಾಮಗಾರಿಯನ್ನು ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದೇವರಮನೆ ಶಿವಕುಮಾರ್ ಅವರು ಇಂದು ಬೆಳಿಗ್ಗೆ  ಪರಿಶೀಲಿಸಿದರು. ಗುಣಮಟ್ಟದ ಕಾಮಗಾರಿ ಮಾಡಲು ಅಧಿಕಾರಿಗಳಿಗೆ ಸೂಚಿಸಿದರು.

ಈ ಸಂದರ್ಭದಲ್ಲಿ ಪ್ರಾಧಿಕಾರದ ಸಹಾಯಕ ಇಂಜಿನಿಯರ್ ಕೆ.ಟಿ. ಅಕ್ಷತಾ, ಎಸ್.ಎಸ್.ಬಡಾವಣೆಯ ನಾಗರಿಕ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಕರಿಬಸಯ್ಯ ಉಪಸ್ಥಿತರಿದ್ದರು.

error: Content is protected !!