ಕೊಕ್ಕನೂರು : ಜೆಡಿಎಸ್‌ ಸದಸ್ಯತ್ವ ಅಭಿಯಾನಕ್ಕೆ ಶಿವಶಂಕರ್‌ ಚಾಲನೆ

ಮಲೇಬೆನ್ನೂರು, ಮಾ.4 – ಕೊಕ್ಕನೂರು ಗ್ರಾಮದಲ್ಲಿ ಜೆಡಿಎಸ್‌ ಸದಸ್ಯತ್ವ ಅಭಿಯಾನಕ್ಕೆ ಮಾಜಿ ಶಾಸಕ ಹೆಚ್‌.ಎಸ್ ಶಿವಶಂಕರ್‌ ಗುರುವಾರ ಚಾಲನೆ ನೀಡಿದರು. ನಂತರ ಜಿ.ಟಿ. ಕಟ್ಟೆ, ಮೂಗಿನಗೊಂದಿ, ಹಿಂಡಸಘಟ್ಟ ಮತ್ತು ಗೋವಿನಹಾಳ್‌ ಗ್ರಾಮಗಳಿಗೂ ತೆರಳಿ ಜೆಡಿಎಸ್‌ ಸದಸ್ಯತ್ವ ಮಾಡಿಸಲು ಪುಸ್ತಕಗಳನ್ನು ನೀಡಿದರು. 

ಈ ವೇಳೆ ಮಾತನಾಡಿದ ಶಿವಶಂಕರ್‌ ಅವರು ಪ್ರತಿ ಬೂತ್‌ಗೂ ಕನಿಷ್ಠ 100 ಜನರ ಸದಸ್ಯತ್ವ ಮಾಡಿಸಿ ಎಂದು ಪಕ್ಷದ ಮುಖಂಡರಿಗೆ, ಕಾರ್ಯಕರ್ತರಿಗೆ ತಿಳಿಸಿದರು.

ಮುಂಬರುವ ಜಿ.ಪಂ, ತಾ.ಪಂ. ಮತ್ತು ವಿಧಾನಸಭೆ ಚುನಾವಣೆಯಲ್ಲಿ ಹರಿಹರ ತಾಲ್ಲೂಕಿನಲ್ಲಿ ಜೆಡಿಎಸ್‌ ತನ್ನ ಸಾಮರ್ಥ್ಯ ಪ್ರದರ್ಶಿಸಲಿದೆ ಎಂದ ಶಿವಶಂಕರ್‌ ಅವರು, ಬೇರು ಮಟ್ಟದಿಂದಲೂ ನಮ್ಮ ಕಾರ್ಯಕರ್ತರು, ಅಭಿಮಾನಿಗಳು ಗಟ್ಟಿಯಾಗಿದ್ದು ಗೆಲುವು ನಮ್ಮದೆ ಎಂದು ಮುಖಂಡರನ್ನು ಹುರಿದುಂಬಿಸಿದರು. 

ಜೆಡಿಎಸ್‌ ಜಿಲ್ಲಾಧ್ಯಕ್ಷ ಬಿ.ಚಿದಾನಂದಪ್ಪ, ಹರಿಹರ ತಾ. ಗ್ರಾಮಾಂತರ ಜೆಡಿಎಸ್‌ ಅಧ್ಯಕ್ಷ ಹಳ್ಳಿಹಾಳ್‌ ಹೆಚ್‌.ಟಿ . ಪರಮೇಶ್ವರಪ್ಪ, ಮಾಜಿ ಅಧ್ಯಕ್ಷ ಬಂಡೇರ ತಿಮ್ಮಣ್ಣ, ಜಿ.ಪಂ. ಮಾಜಿ ಸದಸ್ಯ ಗೋವಿನಹಾಳ್ ಬಸವರಾಜಪ್ಪ, ಮುಖಂಡರಾದ ಹಿಂಡಸಘಟ್ಟ ಮುರುಗೇಶಪ್ಪ, ವಾಸನದ ಗಂಟೇರ ಬಸವರಾಜಪ್ಪ, ಮುಗಿನಗೊಂದಿ ಕಾವೇರಿ ಹನುಮಂತಪ್ಪ, ಪಟೇಲ್ ಮಲ್ಲಪ್ಪ, ಈಶ್ವರಪ್ಪ, ಜಿಗಳಿಯ
ಕೆ.ಆರ್‌.ರಂಗಪಪ್ಪ, ಎಕ್ಕಿಗೊಂದಿ ರುದ್ರಗೌಡ, ವಕೀಲ ವಿವೇಕ್‌,
ಹೆಚ್‌.ಕೆ. ಹನುಮಂತ್‌, ದಾಸರ ನಾಗರಾಜ್‌, ಕೆ.ಪಿ. ಆಂಜನೇಯ ಪಾಟೀಲ್‌, ಜಿ.ಟಿ.ಶೆಟ್ಟಿಯ ಶಿವಾನಂದಸ್ವಾಮಿ, ಗೋವಿನಾಳ್ ದಡ್ಡಿ ಹನುಮಗೌಡ, ಮಲೇಬೆನ್ನೂರಿನ ಎಂ.ಆರ್.ಮಹಾದೇವಪ್ಪ ಸೇರಿದಂತೆ ಮತ್ತಿತರು ಹಾಜರಿದ್ದರು.

error: Content is protected !!