ತರಳಬಾಳು ಹುಣ್ಣಿಮೆ ಮಹೋತ್ಸವಕ್ಕೆ 50 ಸಾವಿರ ಲಾಡು

ದಾವಣಗೆರೆ, ಫೆ.13- ಸಿರಿಗೆರೆಯಲ್ಲಿ ನಾಳೆ ದಿನಾಂಕ 14 ರಿಂದ ನಡೆಯಲಿರುವ 3 ದಿನಗಳ ತರಳಬಾಳು ಹುಣ್ಣಿಮೆ ಮಹೋತ್ಸವಕ್ಕೆ ನಗರದ ಶಿವಸೈನ್ಯ ಯುವಕರ ಸಂಘದ ವತಿಯಿಂದ 50 ಸಾವಿರ ಲಾಡುಗಳನ್ನು ನೀಡಲುದ್ದೇಶಿಸಲಾಗಿದ್ದು, ಇದರ ತಯಾರಿಕೆಗೆ ಶಾಮನೂರು ಶಿವಶಂಕರಪ್ಪ ಕಲ್ಯಾಣ ಮಂಟಪದಲ್ಲಿ ಸಿದ್ದತೆ ಪೂರ್ಣಗೊಂಡಿದೆ. 

ಈ ತಯಾರಿಯಲ್ಲಿ 50 ಜನ ಬಾಣಿಸಗರು ಮೂರು ದಿನಗಳಿಂದ ತಯಾರಿಯನ್ನು ನಡೆಸುತ್ತಿದ್ದು, ಭಾನುವಾರ ಸಿರಿಗೆರೆ ತಲುಪಿತು. ಮಾಗನೂರು ಉಮೇಶ್ ಗೌಡ್ರು, ಶಶಿಧರ್ ಹೆಮ್ಮನಬೇತೂರು, ಲಿಂಗರಾಜು ಅಗಸನಕಟ್ಟೆ, ಕೊರಟಿಕೆರೆ ಶಿವಕುಮಾರ್, ಮೆಳ್ಳೇಕಟ್ಟೆ ಕುಮಾರ್, ಮೆಳ್ಳೇಕಟ್ಟೆ ಶ್ರೀನಿವಾಸ್, ಸತೀಶ್ ಸಿರಿಗೆರೆ, ನಿರಂಜನ ಹಂಪನೂರು, ಅಶೋಕ್ ಹೊನಾಯಕನಹಳ್ಳಿ, ಅಜಯ್‌, ನರೇಂದ್ರ ಮತ್ತಿತರರು ಈ ಕಾರ್ಯದಲ್ಲಿ ಪಾಲ್ಗೊಂಡಿದ್ದರು.

error: Content is protected !!