ವಿನೋಬನಗರದ ಶ್ರೀ ಚೌಡೇಶ್ವರಿ ದೇವಿ ಜಾತ್ರೆ ಪ್ರಯುಕ್ತ ಹಂದರ ಕಂಬ ಪೂಜೆ

ದಾವಣಗೆರೆ, ಫೆ.8- ಇಲ್ಲಿನ ವಿನೋಬನಗರದ ಶ್ರೀ ಚೌಡೇಶ್ವರಿ ದೇವಿ ಜಾತ್ರೆ ಪ್ರಯುಕ್ತ ಇಂದು ಹಂದರ ಕಂಬ ಪೂಜೆ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಸಮಿತಿ ಅಧ್ಯಕ್ಷ ಶ್ರೀನಿವಾಸ್ ದಾಸಕರಿಯಪ್ಪ, ಕಾರ್ಯದರ್ಶಿ ಹೊನ್ನಪ್ಪ, ವಕೀಲರೂ ಆದ ಖಜಾಂಚಿ ಹೆಚ್. ದಿವಾಕರ್, ದೂಡಾ ಅಧ್ಯಕ್ಷ ದೇವರಮನೆ ಶಿವಕುಮಾರ್, ವಿನೋಬನಗರ ಮುಖಂಡರುಗಳಾದ ಜಿ.ಶಿವಯೋಗಪ್ಪ, ನೀಲಕಂಠಪ್ಪ, ಚಿಕ್ಕಿ ಮಂಜು, ಮಹದೇವಪ್ಪ, ಕಿರಣ್, ಸಲ್ಲಳಿ ಮಲ್ಲಣ್ಣ, ಯಲ್ಲಪ್ಪ ಪವಾರ್, ತಿರುಮಲ್ಲೇಶ್, ಉಮೇಶ್, ಬಂಟಿ, ಮಂಜು ಮತ್ತು ಇತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. 

error: Content is protected !!