ಅಭಿವೃದ್ಧಿ ಕೆಲಸಗಳಿಗೆ ಕೊನೆಯೇ ಇಲ್ಲ

ದಾವಣಗೆರೆ, ಫೆ.8- ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳು ನಿರಂತರವಾಗಿ ನಡೆಯುತ್ತಿದ್ದು, ಅಭಿವೃದ್ಧಿ ಕೆಲಸಗಳಿಗೆ ಎಂದಿಗೂ ಕೊನೆ ಇಲ್ಲ ಎಂದು ಶಾಸಕ ಡಾ. ಶಾಮನೂರು ಶಿವಶಂಕರಪ್ಪ ತಿಳಿಸಿದರು.

ಸ್ಥಳೀಯ ಆಜಾದ್‌ನಗರ ಮತ್ತು  ಬಾಷಾನಗರದಲ್ಲಿ  ಸ್ಥಳೀಯ ಶಾಸಕರ ಅನುದಾನ ಮತ್ತು ಮಹಾನಗರ ಪಾಲಿಕೆ 15ನೇ ಹಣಕಾಸು ಅನುದಾನದಡಿ ಹಮ್ಮಿಕೊಂಡ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.

ಮಹಾನಗರ ಪಾಲಿಕೆ ಮಾಜಿ ಸದಸ್ಯ ಶಫೀಕ್ ಪಂಡಿತ್ ಮಾತನಾಡಿದರು.

ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯರಾದ ಶ್ರೀಮತಿ ಹುರ್‍ಬಾನು, ಜಾಕೀರ್ ಅಲಿ, ಮುಖಂಡರುಗಳಾದ ಹೈದರಾಲಿ, ಬಾಬು, ಚಂದ್ರಣ್ಣ, ಮಹಬೂಬ್ ಬಾಷಾ ಬೀಡಾ, ಆದಿಲ್ ಬಾಷಾ, ಅಕ್ರಂ, ಜಿಕ್ರಿಯಾಸಾಬ್, ಇಮಾಮ್ ಹುಸೇನ್, ಜಿಲಾನಿ, ಮೊಟ್ಟೆ ದಾದಾಪೀರ್, ಖಲೀಲ್, ಇಬ್ರಾಹಿಂ, ಸೊಫಿಯಾನ ರಜಾ, ಕೊಟ್ಟೂರು ಇಮ್ರಾನ್, ಆರೀಫ್ ಶೇಖ್, ಇಲಿಯಾಜ್, ಸ್ಮಾರ್ಟ್‍ಸಿಟಿ ನಿರ್ದೇಶಕ ಎಂ.ನಾಗರಾಜ್, ಕೆಆರ್‍ಐಡಿಎಲ್‍ನ ಗಣೇಶ್ ಬಾಬು,  ಪಾಲಿಕೆಯ ಪ್ರೀತಮ್, ಸಚಿನ್ ಮತ್ತಿತರರಿದ್ದರು. 

error: Content is protected !!