ಸಂಕ್ಲೀಪುರ : ಆರೋಗ್ಯವಂತ ಶಿಶು ಪ್ರದರ್ಶನ

ಮಲೇಬೆನ್ನೂರು, ಫೆ.2- ದೇವರಬೆಳಕೆರೆ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯ ಸಂಕ್ಲೀಪುರ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಆರೋಗ್ಯವಂತ ಶಿಶುಗಳ ಪ್ರದರ್ಶನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಸುಧಾ ಮೈಲಾರಪ್ಪ ಪ್ರದರ್ಶನದಲ್ಲಿ ಅವರ ಪುತ್ರಿ ಚಂದನಾಗೆ ಪ್ರಥಮ ಬಹುಮಾನ ಮತ್ತು ಶೋಭಾ ಮಂಜುನಾಥ್ ಅವರ ಪುತ್ರಿ ನಿತ್ಯಶ್ರೀಗೆ ದ್ವಿತೀಯ ಹಾಗೂ ಭಾಗ್ಯ ಬಸವನಗೌಡರ ಪುತ್ರಿ ಚಂದನಾಗೆ ತೃತೀಯ ಬಹುಮಾನವನ್ನು ಹರಳಹಳ್ಳಿ
ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ಅನುಷಾ ನಾಗರಾಜ್ ವಿತರಿಸಿದರು.

ಈ ವೇಳೆ ವೈದ್ಯಾಧಿಕಾರಿ ಡಾ. ರಮೇಶ್ ಮಾತನಾಡಿ, ತಾಯಿ ಗರ್ಭೀಣಿಯಾಗಿದ್ದಾಗ ಸೊಪ್ಪು, ತರಕಾರಿ, ಮೊಟ್ಟೆ, ಹಣ್ಣು, ಮೊಳಕೆ ಕಾಳುಗಳನ್ನು ಉಪಯೋಗಿಸಬೇಕು. ಆಗ ಹುಟ್ಟುವ ಮಕ್ಕಳೂ ಕೂಡಾ ಆರೋಗ್ಯದಿಂದ ಇರುತ್ತಾರೆ ಎಂದರು.

ತಾಲ್ಲೂಕು ಹಿರಿಯ ಆರೋಗ್ಯ ನಿರೀಕ್ಷ ಣಾಧಿಕಾರಿ ಎಂ.ಉಮ್ಮಣ್ಣ, ಗ್ರಾ.ಪಂ. ಸದಸ್ಯೆ ಕಾಂತಮ್ಮ, ಹಿರಿಯ ಪ್ರಾಥಮಿಕ ಆರೋಗ್ಯ ಸುರಕ್ಷಣಾಧಿಕಾರಿ ಲಕ್ಷ್ಮಿ, ಆಶಾ ಕಾರ್ಯ ಕರ್ತೆ ಜ್ಯೋತಿ, ರಂಗಮ್ಮ, ಅಂಗನ ವಾಡಿ ಕಾರ್ಯಕರ್ತೆ ರುದ್ರಮ್ಮ ಭಾಗವಹಿಸಿದ್ದರು.

error: Content is protected !!