ಮರಾಠ ಪರಿಷತ್‌ನಿಂದ ನೊಂದವರಿಗೆ ಚೆಕ್ ವಿತರಣೆ

ದಾವಣಗೆರೆ, ಫೆ. 1- ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್ (ಬೆಂಗಳೂರು) ಕೇಂದ್ರ ಸಮಿತಿಯಿಂದ ನಗರದ ಅಂಗವಿಕಲರಿಗೆ, ವೃದ್ಧರಿಗೆ, ವಿದ್ಯಾರ್ಥಿಗಳಿಗೆ ವಿಧವಾ ವೇತನದ ಚೆಕ್‌ಗಳನ್ನು ವಿತರಿಸಲಾಯಿತು.

ಕೇಂದ್ರ ಸಮಿತಿಯ ಅಧ್ಯಕ್ಷ ಸುರೇಶರಾವ್ ಸಾಠೆ, ಛೇರ್ಮನ್ ರಾಣೋಜಿರಾವ್ ಸಾಠೆ, ಖಜಾಂಚಿಗಳಾದ ವೆಂಕಟರಾವ್ ಚೌಹಾಣ್, ಎಸ್.ಆರ್. ಶಿಂಧೆ, ನಾಗೇಶ್‌ರಾವ್ ವನ್ಸೆ ಅವರುಗಳಿಗೆ ಪರಿಷತ್ತಿನ
ಜಿಲ್ಲಾ ಘಟಕದ ಅಧ್ಯಕ್ಷ ಜಿ.ಹೆಚ್. ಮರಿಯೋಜಿರಾವ್ ಕೃತಜ್ಞತೆ ಸಲ್ಲಿಸಿದರು.

ಜಿಲ್ಲಾ ಉಪಾಧ್ಯಕ್ಷ ಕೃಷ್ಣರಾವ್ ಸಾವಂತ್, ಪ್ರಧಾನ ಕಾರ್ಯದರ್ಶಿ ಚೇತನ್‌ಕುಮಾರ್, ಸಹ ಕಾರ್ಯದರ್ಶಿ ಗೋಪಾಲರಾವ್ ಸಾವಂತ್, ಜಿಲ್ಲಾ ನಿರ್ದೇಶಕ  ಜಿ.ಎಂ. ಮಾರುತಿ ರಾವ್, ನಗರ ಘಟಕದ ಅಧ್ಯಕ್ಷ ಹನುಮಂತ ರಾವ್ ಸುರ್ವೆ, ಜಿಲ್ಲಾ ಘಟಕದ ಮಹಿಳಾ ಅಧ್ಯಕ್ಷರಾದ ವೀಣಾ ಮೋರೆ, ಪ್ರಧಾನ ಕಾರ್ಯದರ್ಶಿಗಳಾದ ವಿಜಯಲಕ್ಷ್ಮಿ ಉದಯ್, ಕಮಲಾಕ್ಷಿ ಪಿಸಾಳೆ, ಶ್ರೀನಿವಾಸ  ಮತ್ತು ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

error: Content is protected !!