ಮಲೇಬೆನ್ನೂರು, ಜ.31- ಯಲವಟ್ಟಿ ಗ್ರಾಮದ ಶ್ರೀ ಗುರು ಸಿದ್ಧಾಶ್ರಮದ ಸಮುದಾಯ ಭವನದ ಕೊಠಡಿಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸೇವಾ ಸಿಂಧು ಕೇಂದ್ರವನ್ನು ಶ್ರೀ ಯೋಗಾನಂದ ಸ್ವಾಮೀಜಿ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು.
ಮಲೇಬೆನ್ನೂರು ಯೋಜನಾಧಿಕಾರಿ ವಸಂತ್ ದೇವಾಡಿಗ ಡಿಸಿಸಿ ಬ್ಯಾಂಕಿನ ಮಾಜಿ ಉಪಾಧ್ಯಕ್ಷ ಜಿಗಳಿ ಆನಂದಪ್ಪ, ಗ್ರಾಮದ ಮುಖಂಡರಾದ ಜಿ.ಆಂಜನೇಯ, ಡಿ.ಹೆಚ್.ಚನ್ನಬಸಪ್ಪ, ಕೊಟ್ರೇಶ್ ನಾಯ್ಕ, ಎಂ.ಜಯಣ್ಣ, ಪಿಡಿಓ ರಾಮನಗೌಡ, ವಲಯ ಮೇಲ್ವಿಚಾರಕಿ ಪದ್ಮಾವತಿ, ಒಕ್ಕೂಟದ ಅಧ್ಯಕ್ಷೆ ಪೂರ್ಣಿಮಾ ಸೇವಾ ಪತ್ರಿನಿಧಿಗಳಾದ ಮಮತಾ, ರತ್ನಮ್ಮ, ಜ್ಞಾನವಿಕಾಸ ಮೇಲ್ವಿಚಾರಕಿ ರಕ್ಷಿತಾ, ಸೇವಾ ಸಿಂಧು ಅಧಿಕಾರಿ ಮಂಜುನಾಥ್ ಮತ್ತಿತರರು ಈ ವೇಳೆ ಹಾಜರಿದ್ದರು.