ದೇಶದ ಐಕ್ಯತೆ, ಸಮಗ್ರತೆಗೆ ಒಟ್ಟಾಗಿ ಶ್ರಮಿಸಬೇಕು

ಕುಂದೂರು ಗ್ರಾ.ಪಂ. ಗಣರಾಜ್ಯೋತ್ಸವದಲ್ಲಿ ಕುಂದೂರು ಗ್ರಾ.ಪಂ. ಅಧ್ಯಕ್ಷ ಚಿದಾನಂದಮೂರ್ತಿ

ಹೊನ್ನಾಳಿ, ಜ. 28- ದೇಶದ ಐಕ್ಯತೆ ಮತ್ತು ಸಮಗ್ರತೆಗೆ ಎಲ್ಲರೂ ಶ್ರಮಿಸಬೇಕು ಎಂದು ತಾಲ್ಲೂಕಿನ ಕುಂದೂರು ಗ್ರಾ.ಪಂ. ಅಧ್ಯಕ್ಷ ಚಿದಾನಂದಮೂರ್ತಿ ಹೇಳಿದರು.

ತಾಲ್ಲೂಕಿನ ಕುಂದೂರು ಗ್ರಾ.ಪಂ. ಕಛೇರಿ ಆವರಣದಲ್ಲಿ ಹಮ್ಮಿಕೊಂಡಿದ್ದ ಗಣರಾಜ್ಯೋತ್ಸವ ಸಮಾರಂಭದಲ್ಲಿ ಮಹಾತ್ಮಗಾಂಧಿ, ಡಾ. ಬಿ.ಆರ್. ಅಂಬೇಡ್ಕರ್ ಭಾವಚಿತ್ರಗಳಿಗೆ ಪೂಜೆ ಸಲ್ಲಿಸಿ, ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

ಸ್ವಾತಂತ್ರ್ಯೋತ್ತರ ಭಾರತ ದೇಶ ಹಲವಾರು ಕ್ಷೇತ್ರಗಳಲ್ಲಿ ಮಹತ್ತರ ಸಾಧನೆ ಮಾಡಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸಾಧನೆ ಮಾಡುವ ಮೂಲಕ ಬಲಿಷ್ಠ ರಾಷ್ಟ್ರ ನಿರ್ಮಾಣಕ್ಕೆ ನಾವೆಲ್ಲರೂ ವೈಯಕ್ತಿಕ ಕಾಣಿಕೆ ನೀಡೋಣ ಎಂದು ತಿಳಿಸಿದರು.

ಮುಖಂಡರಾದ ಎಂ.ಪಿ. ಮಲ್ಲಿಕಾರ್ಜುನ ಸ್ವಾಮಿ, ಗ್ರಾ.ಪಂ. ಉಪಾಧ್ಯಕ್ಷೆ ರೇಖಾ ಎನ್.ಜಿ. ರೇವಣಸಿದ್ದಪ್ಪ, ಸದಸ್ಯರಾದ ಎಸ್.ಆರ್. ಪ್ರಸನ್ನ ಕುಮಾರ್, ಎಸ್. ಧನಂಜಯ, ರಹಮತ್‌ ಉಲ್ಲಾ ಖಾನ್, ಸಿ. ಆಂಜನೇಯ, ಉದಯ್‌ಕುಮಾರ್, ಲತಾ ಹಾಲೇಶ್ ಮುಡೋಳ್, ಮಂಜುಳಾ, ರತ್ನಮ್ಮ ಕರಿಬಸಪ್ಪ, ನೇತ್ರಾವತಿ, ಕವಿತಾ, ನುಸ್ರುತ್ ಜಬೀನಾ, ರೇಣುಕಮ್ಮ, ಸುರೇಶ್, ಕಾರ್ಯದರ್ಶಿ ವೀರೇಂದ್ರ, ಕಂಪ್ಯೂಟರ್ ಆಪರೇಟರ್ ಸುಮಲತಾ ಉಪಸ್ಥಿತರಿದ್ದರು.

error: Content is protected !!