ದಾವಣಗೆರೆ ಸಮಗ್ರ ಅಭಿವೃದ್ಧಿಯತ್ತ : ಎಸ್ಸೆಸ್

ದಾವಣಗೆರೆ, ಜ.28- ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರವು ಸಮಗ್ರ ಅಭಿವೃದ್ಧಿಯತ್ತ ಸಾಗುತ್ತಿದೆ ಎಂದು ಶಾಸಕ ಡಾ|| ಶಾಮನೂರು ಶಿವಶಂಕರಪ್ಪ ತಿಳಿಸಿದರು.

20ನೇ ವಾರ್ಡಿನ ಭಾರತ್ ಕಾಲೋನಿ ಮತ್ತು 21ನೇ ವಾರ್ಡಿನ ಬಸಾಪುರದಲ್ಲಿ ನಗರ ಪಾಲಿಕೆ ಮಹಾತ್ಮ ಗಾಂಧಿ ವಿಕಾಸ ಯೋಜನೆಯಡಿ ಸಿ.ಸಿ.ರಸ್ತೆ,  ಚರಂಡಿ ನಿರ್ಮಾಣ ಕಾಮಗಾರಿಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.

15-20 ವರ್ಷಗಳಿಂದ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಹಂತ ಹಂತವಾಗಿ ಕೈಗೊಂಡು ಕ್ಷೇತ್ರದ ಎಲ್ಲಾ ವಾರ್ಡ್, ಗ್ರಾಮಾಂತರ ಪ್ರದೇಶ ಗಳನ್ನು ಅಭಿವೃದ್ಧಿ ಮಾಡಲಾಗುತ್ತಿದೆ ಎಂದರು.

ಪಾಲಿಕೆ ಸದಸ್ಯರುಗಳಾದ ಮೀನಾಕ್ಷಿ ಜಗದೀಶ್, ಶಿವಲೀಲಾ ಕೊಟ್ರಯ್ಯ, ಪಾಲಿಕೆ ಮಾಜಿ ಸದಸ್ಯ ಬಾ.ಮ. ಬಸವರಾಜಯ್ಯ, ಟಿ.ಡಿ.ಹಾಲೇಶ್, ವೆಂಕಟೇಶ ನಾಯ್ಕ, ಕೆ. ಎಲ್. ಹರೀಶ್, ಅಲೆಕ್ಸಾಂ ಡರ್ (ಜಾನು), ವೀರೇಶ್ ಎಲ್, ಮುನಿ ಸ್ವಾಮಿ, ಆನೆಕೊಂಡ ಗೌಡ್ರು ಅಜ್ಜಪ್ಪ, ಆನೆ ಕೊಂಡ ನಾಗ ರಾಜ್, ಎಸ್.ಸುರೇಂದ್ರಪ್ಪ, ಸಿ. ಮಹೇಶ್ವರಪ್ಪ, ಎಂ.ಎಸ್.ಕೊಟ್ರಯ್ಯ, ನಾಗೇಂದ್ರ ಚಾರ್, ಕಳೂರು ಮಹೇಶ್ವರಪ್ಪ, ಕೆ.ಬಿ.ಲಿಂಗ ರಾಜ್, ದೇವೇಂದ್ರಪ್ಪ, ಕೆ.ಬಿ.ಪ್ರಕಾಶ್, ಶಿವ ಕುಮಾರ್, ಆನೆಕೊಂಡ ಲಿಂಗರಾಜ್, ಬಿ.ಟಿ. ಮರುಳಸಿದ್ದಪ್ಪ, ಎನ್.ಎಂ. ಕೊಟ್ರಯ್ಯ, ವಾಮ ದೇವಯ್ಯ, ಪಂಚಾಕ್ಷರಯ್ಯ, ಅಕ್ಕಿ ರಾಜು, ಗಿರೀಶ್, ನಿಂಗಪ್ಪ, ಕ್ಯಾಂಪ್‍ನ ನಾಗರಾಜ್, ವೀರೇಶ್, ತಿಪ್ಪೇಶ್, ಹನುಮಂತಪ್ಪ ಮತ್ತು ಇತರರು ಉಪಸ್ಥಿತರಿದ್ದರು.

error: Content is protected !!