ಜಿಗಳಿಯಲ್ಲಿ ಶ್ರೀ ಸಿದ್ಧರಾಮ ಜಯಂತಿ

ಮಲೇಬೆನ್ನೂರು, ಜ.18- ಜಿಗಳಿ ಗ್ರಾಮ ಪಂಚಾಯ್ತಿ ಕಛೇರಿಯಲ್ಲಿ ಶ್ರೀ ಗುರು ಸಿದ್ಧರಾಮೇಶ್ವರರ 849 ನೇ ಜಯಂತಿಯನ್ನು  ಸರಳವಾಗಿ ಆಚರಿಸಲಾಯಿತು. ಗ್ರಾ.ಪಂ. ಅಧ್ಯಕ್ಷರಾದ ರೇಣುಕಾ ಪೂಜಾರ್ ನಾಗರಾಜ್, ಉಪಾಧ್ಯಕ್ಷ ಜಿ.ಬೇವಿನಹಳ್ಳಿಯ ಪಿ.ಹೆಚ್.ದೇವರಾಜ್, ಸದಸ್ಯರಾದ ಎನ್.ಎಂ.ಪಾಟೀಲ್, ಕೆ.ಜಿ.ಬಸವರಾಜ್, ಎಕ್ಕೆಗೊಂದಿ ಚೇತನ್‌ಕುಮಾರ್, ಪಿಡಿಓ ಉಮೇಶ್, ಗ್ರಾ.ಪಂ. ಮಾಜಿ ಅಧ್ಯಕ್ಷರಾದ ಬಿ.ಎಂ. ದೇವೇಂದ್ರಪ್ಪ, ಎಂ.ವಿ.ನಾಗರಾಜ್, ಬೇವಿನಹಳ್ಳಿಯ ಬಿ.ಕೆ.ಮಹೇಶ್ವರಪ್ಪ, ಡಿಸಿಸಿ ಬ್ಯಾಂಕ್  ಮಾಜಿ ಉಪಾಧ್ಯಕ್ಷ ಜಿ.ಆನಂದಪ್ಪ, ಮುಖಂಡರಾದ ಜಿ.ಎಂ.ಆನಂದಪ್ಪ, ಕ್ಯಾಂಪ್ ಸಿದ್ದಪ್ಪ, ಹೆಚ್. ಈರಪ್ಪ, ಜಿ.ಆರ್.ಹಾಲೇಶ್ ಕುಮಾರ್, ಸಿ.ಎನ್. ಪರಮೇಶ್ವರಪ್ಪ, ಬೇವಿನಹಳ್ಳಿ ಎ.ಕೆ.ಸೋಮಶೇಖರ್, ಜಿ.ಪಿ.ಮಂಜುನಾಥ, ಉಪನ್ಯಾಸಕ ಕರಿಬಸಯ್ಯ, ಗ್ರಾ.ಪಂ. ಎಸ್.ಡಿ.ಎ. ಬಿ.ದಾನಪ್ಪ, ಬಿಲ್ ಕಲೆಕ್ಟರ್ ಮೌನೇಶ್, ಪತ್ರಕರ್ತ ಪ್ರಕಾಶ್ ಮತ್ತು ಇತರರು ಭಾಗವಹಿಸಿದ್ದರು.

error: Content is protected !!