ಹರಿಹರ : ಧಾರ್ಮಿಕ ಕೇಂದ್ರಗಳ ಸ್ವಚ್ಛತಾ ಸಪ್ತಾಹ

ಹರಿಹರ, ಜ. 18- ನಗರದಲ್ಲಿ ಇದೇ 1 ರಿಂದ 14ರವರೆಗೆ ನಡೆದ 64 ಧಾರ್ಮಿಕ ಕೇಂದ್ರಗಳ ಸ್ವಚ್ಛತಾ ಸಪ್ತಾಹ ಕಾರ್ಯಕ್ರಮವನ್ನು ಗ್ರಾಮಾಭಿವೃದ್ಧಿ ಯೋಜನೆ, ಒಕ್ಕೂಟದವರು ಮತ್ತು ಸ್ಥಳೀಯರ ಸಹಕಾರದೊಂದಿಗೆ ದೇವಸ್ಥಾನಗಳ ಗರ್ಭಗುಡಿ, ಆವರಣ, ವಠಾರ ಮತ್ತು ಪೂಜಾ ಪರಿಕರಗಳನ್ನು  ಶ್ರದ್ಧಾಳುಗಳು ಸ್ವಯಂ ಪ್ರೇರಣೆಯಿಂದ ಶುಚಿಗೊಳಿಸಿದರು.

ನಗರದ ಮೌನೇಶ್ವರ ದೇವಸ್ಥಾನದಿಂದ ಚಾಲನೆ ನೀಡಲಾಗಿದ್ದು ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹರಿಹರ ಯೋಜನಾಧಿಕಾರಿ ಗಣಪತಿ ಮಾಳಂಜಿ, ಮೇಲ್ವಿಚಾರಕರಾದ ಸಂಗೀತಾ, ಯಶೋಧ, ಗಂಗಮ್ಮ, ದುರ್ಗಾಭವಾನಿ, ಕೃಷಿ ಮೇಲ್ವಿಚಾರಕ ಸುನೀಲ್, ಆಂತರಿಕ ಲೆಕ್ಕಪರಿಶೋಧಕ ಲೋಕೇಶ್, ಒಕ್ಕೂಟದ ಪದಾಧಿಕಾರಿಗಳು, ಸದಸ್ಯರು, ಸ್ಥಳೀಯರು, ಸೇವಾಪ್ರತಿನಿಧಿಗಳು ಪಾಲ್ಗೊಂಡಿದ್ದರು. 

ಸೇವಾಪ್ರತಿನಿಧಿ ಸಿದ್ದಮ್ಮ ಸ್ವಾಗತಿಸಿದರು, ಮೇಲ್ವಿಚಾರಕ ಚಂದ್ರಹಾಸ್ ಬಿ. ನಾಯ್ಕ್‌ ವಂದಿಸಿದರು. ವಲಯ ಮೇಲ್ವಿಚಾರಕ ಪ್ರವೀಣ್ ನಿರೂಪಿಸಿದರು.

error: Content is protected !!