ದಾವಣಗೆರೆ,ಜ.9- ಧರ್ಮಸ್ಥಳದ ಶ್ರೀ ಮಂಜುನಾಥ ಸ್ವಾಮಿ ದೇವಸ್ಥಾನದಲ್ಲಿ ಪ್ರತಿನಿತ್ಯ ನಡೆಯುವ ಅನ್ನ ದಾಸೋಹಕ್ಕೆ ನಗರದ ಅಣಬೇರು ಮಂಜಣ್ಣ ಮತ್ತು ಕುಟುಂಬದವರು ಹಾಗೂ ಅವರ ಸ್ನೇಹಿತರೊಡಗೂಡಿ ಒಟ್ಟು 330 ಕ್ವಿಂಟಾಲ್ ಅಕ್ಕಿಯನ್ನು ದಾನ ಮಾಡಲಾಗಿದೆ.
ಅಕ್ಕಿ ಲೋಡಾದ ಲಾರಿಗೆ ಇಂದು ಸಂಜೆ ಕೆ.ಬಿ. ಬಡಾವಣೆಯಲ್ಲಿ ಪೂಜೆ ಸಲ್ಲಿಸುವುದರ ಮೂಲಕ ಧರ್ಮಸ್ಥಳಕ್ಕೆ ಕಳುಹಿಸಿಕೊಡಲಾಯಿತು. ಪ್ರತಿ ವರ್ಷದಂತೆ ಈ ವರ್ಷವೂ 22ನೇ ವರ್ಷದ ಅಕ್ಕಿ ಸಮರ್ಪಣೆ ಇದಾಗಿರುತ್ತದೆ ಎಂದು ಅಣಬೇರು ಮಂಜಣ್ಣ ತಿಳಿಸಿದ್ದಾರೆ.
ಅಣಬೇರು ದಿ. ಶ್ರೀಮತಿ ದ್ಯಾಮಮ್ಮ ಮತ್ತು ದಿ. ದೇವೇಂದ್ರಪ್ಪ ದಂಪತಿ ಪುತ್ರ ಮಂಜಣ್ಣ, ಅವರ ಪತ್ನಿ ಶ್ರೀಮತಿ ಲತಾ ಮತ್ತು ಕುಟುಂಬ ವರ್ಗದವರು ಸೇರಿದಂತೆ, ಸ್ನೇಹಿತರು, ಬಂಧುಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.