ಡಿಕೆ ಸಹೋದರರು ಭಸ್ಮಾಸುರರಿದ್ದಂತೆ

ಡಿ.ಕೆ. ಸುರೇಶ್ ನಡವಳಿಕೆ ಖಂಡಿಸಿ ಹೊನ್ನಾಳಿಯಲ್ಲಿ ನಡೆದ ಬಿಜೆಪಿ ಪ್ರತಿಭಟನೆಯಲ್ಲಿ ಶಾಸಕ ರೇಣುಕಾಚಾರ್ಯ

ಹೊನ್ನಾಳಿ, ಜ.4- ಗೂಂಡಾ ಸಂಸ್ಕೃತಿಯ ಡಿ.ಕೆ.ಸುರೇಶ್  ಮತ್ತವರ ಸಹೋದರ – ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಕನಕಪುರದ ಬಂಡೆಗಳಲ್ಲ, ಬದಲಿಗೆ ಭಸ್ಮಾಸುರರಿದ್ದಂತೆ ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಶಾಸಕ ಎಂ.ಪಿ.ರೇಣುಕಾಚಾರ್ಯ ಲೇವಡಿ ಮಾಡಿದರು.

ಕಾಂಗ್ರೆಸ್ ಸಂಸದ  ಡಿ.ಕೆ. ಸುರೇಶ್ ಅವರ ನಡವಳಿಕೆಯನ್ನು ಖಂಡಿಸಿ, ತಾಲ್ಲೂಕು ಬಿಜೆಪಿ ವತಿಯಿಂದ  ಪಟ್ಟಣದ ಸಂಗೊಳ್ಳಿ ರಾಯಣ್ಣ ವೃತ್ತದ ಬಳಿ ಇಂದು ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. 

ಕೇಂದ್ರ, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಗಳು ಅಧಿಕಾರಕ್ಕೆ ಬಂದ ಮೇಲೆ  ಗೂಂಡಾ ಸಂಸ್ಕೃತಿ ಬದಲಾಗಿದ್ದು,  ಜನರ ಅಭಿವೃದ್ಧಿ ಕೆಲಸಗಳನ್ನು ಮಾಡುವ  ಮೂಲಕ ಅಧಿಕಾರಕ್ಕೆ ಬರಲು ಸಾಧ್ಯ ಎಂಬುದನ್ನು ಸುರೇಶ್ ತಿಳಿದುಕೊಳ್ಳಬೇಕು ಎಂದರು. ಡಿ.ಕೆ. ಸುರೇಶ್ ಅವರು ಬೇಷರತ್ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ವಿಧಾನ ಪರಿಷತ್ ಸದಸ್ಯ ಡಿ.ಎಸ್. ಅರುಣ್ ಮಾತನಾಡಿ, ಕಾಂಗ್ರೆಸ್ ಕೇವಲ ಜಾತಿ ಮತ್ತು ಓಟ್ ಬ್ಯಾಂಕ್ ರಾಜಕಾರಣ ಹಾಗೂ ದಬ್ಬಾಳಿಕೆಗಳ ಮೂಲಕ ಅಧಿಕಾರ ಮಾಡಿಕೊಂಡು ಬಂದಿದ್ದು, ಇದೀಗ ಜನರ ವಿಶ್ವಾಸ ಕಳೆದುಕೊಂಡಿದೆ  ಎಂದು ಹೇಳಿದರು.

ಸಂಗೊಳ್ಳಿ ರಾಯಣ್ಣ ವೃತ್ತದ ಬಳಿ ನೂರಾರು ಜನ ಕಾರ್ಯಕರ್ತರು, ಮುಖಂಡರು ಸೇರಿ ಡಿ.ಕೆ. ಸುರೇಶ್ ಅವರ ಪ್ರತಿಕೃತಿಯನ್ನು ದಹನ ಮಾಡುವ ಮೂಲಕ 
ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ತಾ. ಅಧ್ಯಕ್ಷ ಜೆ.ಕೆ. ಸುರೇಶ್ ಮತ್ತಿತರರು ಮಾತನಾಡಿ ದರು. ಪುರಸಭೆ ಅಧ್ಯಕ್ಷ ಬಾಬು ಹೋಬಳ ದಾರ್, ಉಪಾಧ್ಯಕ್ಷೆ ರಂಜಿತ ಚನ್ನಪ್ಪ ವಡ್ಡಿ, ಮುಖಂಡರಾದ ಶಾಂತರಾಜ್ ಪಾಟೀಲ್, ಅರಕೆರೆ ಎ.ಬಿ. ಹನುಮಂತಪ್ಪ, ನಾಗರಾಜ್, ಜಿ.ಪಂ.ಮಾಜಿ ಸದಸ್ಯ ಎಂ.ಆರ್.ಮಹೇಶ್, ತಾ.ಪಂ. ಮಾಜಿ ಸದಸ್ಯ ಸಿ.ಆರ್. ಶಿವಾನಂದ್, ರಂಗಪ್ಪ, ಕುಬೇಂದ್ರಪ್ಪ, ಜಿ.ಪಂ. ಮಾಜಿ ಉಪಾಧ್ಯಕ್ಷ ಕೆ.ವಿ. ಚನ್ನಪ್ಪ ಹಾಗು ಇತರರಿದ್ದರು.

error: Content is protected !!