ಜಿಲ್ಲೆಯ ಗ್ರಾಮ ಪಂಚಾಯ್ತಿಗಳಿಗೆ 20 ರಂದು ಉಪ ಚುನಾವಣೆ

ದಾವಣಗೆರೆ, ಮೇ 5- ಚನ್ನಗಿರಿ, ದಾವಣಗೆರೆ, ಜಗಳೂರು, ಹರಿಹರ ಹಾಗೂ ನ್ಯಾಮತಿ ತಾಲ್ಲೂಕಿನ ಕೆಲ ಗ್ರಾಮ ಪಂಚಾಯಿತಿಗಳಲ್ಲಿ ಖಾಲಿ ಇರುವ ಹಾಗೂ ತೆರವಾಗಿರುವ ಸದಸ್ಯರ ಸ್ಥಾನಗಳಿಗೆ ಇದೇ ದಿನಾಂಕ 20ರಂದು ಉಪಚುನಾವಣೆ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ತಿಳಿಸಿದ್ದಾರೆ.

ಚನ್ನಗಿರಿ ತಾಲ್ಲೂಕು :  ಗ್ರಾಮ ಪಂಚಾಯಿತಿ – ಚಿರಡೋಣಿ, ಕ್ಷೇತ್ರ ಚಿರಡೋಣಿ-3 (ಹಿಂದುಳಿದ ವರ್ಗ(ಅ) ), –ಹೊಸಕೆರೆ ಗ್ರಾಮ ಪಂಚಾಯಿತಿ (ಬಸವಾಪಟ್ಟಣ), ಕ್ಷೇತ್ರ ಹೊಸಕೆರೆ (ಬಸವಾಪಟ್ಟಣ)-1, (ಹಿಂದುಳಿದ ವರ್ಗ ಅ (ಮಹಿಳೆ)  ಗ್ರಾಮ ಪಂಚಾಯಿತಿ – ಗೊಪ್ಪೇನಹಳ್ಳಿ, ಕ್ಷೇತ್ರ ಪೆನ್ನಸಮುದ್ರ-3 ಅನುಸೂಚಿತ ಜಾತಿ (ಮಹಿಳೆ).

ದಾವಣಗೆರೆ ತಾಲ್ಲೂಕು : ಕಾಡಜ್ಜಿ ಗ್ರಾಪಂ, ಕ್ಷೇತ್ರ ಕಾಡಜ್ಜಿ, (ಅನುಸೂಚಿತ ಜಾತಿ) ಕುಕ್ಕುವಾಡ ಗ್ರಾ.ಪಂ, ಕ್ಷೇತ್ರ ಕುಕ್ಕುವಾಡ (ಹಿಂದುಳಿದ ವರ್ಗ `ಬ’)

ಜಗಳೂರು ತಾಲ್ಲೂಕು, ಬಿದರಕೆರೆ ಗ್ರಾಪಂ, ಕ್ಷೇತ್ರ ಬಿದರಕೆರೆ-1 (ಅನುಸೂಚಿತ ಜಾತಿ) ಕ್ಷೇತ್ರ, ರಸ್ತೆ ಮಾಕುಂಟೆ (ಮ) ಗೊಲ್ಲರಹಟ್ಟಿ(ಸಾಮಾನ್ಯ).

ಹರಿಹರ ತಾಲ್ಲೂಕು : ಎಳೆಹೊಳೆ ಗ್ರಾಪಂ, ಕ್ಷೇತ್ರ ಮಳಲಹಳ್ಳಿ (ಅನುಸೂಚಿತ ಪಂಗಡ).

ನ್ಯಾಮತಿ ತಾಲ್ಲೂಕು: ಗುಡ್ಡೇಹಳ್ಳಿ ಗ್ರಾಪಂ, ಕ್ಷೇತ್ರ ಜೀನಹಳ್ಳಿ-1, (ಅನುಸೂಚಿತ ಜಾತಿ), ಸಾಮಾನ್ಯ (ಮಹಿಳೆ), ಕ್ಷೇತ್ರ ಜೀನಹಳ್ಳಿ-2 (ಅನುಸೂಚಿತ ಪಂಗಡ (ಮಹಿಳೆ)), (ಸಾಮಾನ್ಯ), (ಸಾಮಾನ್ಯ ಮಹಿಳೆ).

ಇದೇ ದಿನಾಂಕ 10 ರಂದು ನಾಮಪತ್ರಗಳನ್ನು ಸಲ್ಲಿಸಲು ಕೊನೆಯ ದಿನ.   11 ರಂದು ನಾಮಪತ್ರಗಳನ್ನು ಪರಿಶೀಲಿಸಲು ಕೊನೆಯ ದಿನ. 13 ರಂದು ಉಮೇದುವಾರಿಕೆಗಳನ್ನು ಹಿಂತೆಗೆದುಕೊಳ್ಳಲು ಕೊನೆಯ ದಿನ ಎಂದು ಜಿಲ್ಲಾಧಿಕಾರಿಗಳು ವಿವರಿಸಿದ್ದಾರೆ.

error: Content is protected !!