`ನನ್ನ ಜೀವನ – ನನ್ನ ಸ್ವಚ್ಛ ನಗರ’ : ದಾವಣಗೆರೆ ಪಾಲಿಕೆಗೆ ಪ್ರಶಸ್ತಿ ಪ್ರದಾನ

`ನನ್ನ ಜೀವನ – ನನ್ನ ಸ್ವಚ್ಛ ನಗರ’ : ದಾವಣಗೆರೆ ಪಾಲಿಕೆಗೆ ಪ್ರಶಸ್ತಿ ಪ್ರದಾನ

ಬೆಂಗಳೂರು,ಜು.27- ಕೇಂದ್ರ ಸರ್ಕಾರದ ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿಯ `ನನ್ನ ಜೀವನ – ನನ್ನ ಸ್ವಚ್ಛ ನಗರ’ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸುವುದರ ಮೂಲಕ ಪ್ರಥಮ ಸ್ಥಾನಕ್ಕೆ ಭಾಜನರಾಗಿರುವ ದಾವಣಗೆರೆ ಮಹಾನಗರ ಪಾಲಿಕೆಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಬೆಂಗಳೂರಿನಲ್ಲಿ ಇಂದು ನಡೆದ ಸಮಾರಂಭದಲ್ಲಿ ದಾವಣಗೆರೆ ಮಹಾನಗರ ಪಾಲಿಕೆ ಆಯುಕ್ತರಾದ ಶ್ರೀಮತಿ ರೇಣುಕಾ ಅವರಿಗೆ ಪೌರಾ ಡಳಿತ ಸಚಿವ ರೆಹಮಾನ್ ಖಾನ್ ಅವರು ಪ್ರಶಸ್ತಿ ಪ್ರದಾನ ಮಾಡಿದರು.

ದಾವಣಗೆರೆ ಮಹಾನಗರ ಪಾಲಿಕೆಯಲ್ಲದೇ, ಕರ್ನಾಟಕದ 6 ನಗರ ಪಾಲಿಕೆ, ನಗರಸಭೆ ಈ ಪ್ರಶಸ್ತಿಗೆ ಆಯ್ಕೆಯಾಗಿದ್ದು, ಈ ಎಲ್ಲಾ ಪಾಲಿಕೆ ಆಯುಕ್ತರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪೌರಾಡಳಿತ ನಿರ್ದೇ ಶನಾಲಯದ ನಿರ್ದೇಶಕರಾದ ಶ್ರೀಮತಿ ಮಂಜುಶ್ರೀ ಉಪಸ್ಥಿತರಿದ್ದರು.

error: Content is protected !!