ಪ್ರವಾಹ ಪೀಡಿತ ಉಕ್ಕಡಗಾತ್ರಿಗೆ ಎಸಿ ದುರ್ಗಾಶ್ರೀ ಭೇಟಿ

ಪ್ರವಾಹ ಪೀಡಿತ ಉಕ್ಕಡಗಾತ್ರಿಗೆ ಎಸಿ ದುರ್ಗಾಶ್ರೀ ಭೇಟಿ

ಮಲೇಬೆನ್ನೂರು, ಜು.25- ತುಂಗಭದ್ರಾ ನದಿಯ ಹಿನ್ನೀರಿನಲ್ಲಿ ಮುಳುಗಡೆಯಾಗಿರುವ ಉಕ್ಕಡಗಾತ್ರಿ-ಫತ್ತೇಪುರ ಸಂಪರ್ಕ ಸೇತುವೆ ಮತ್ತು ಜಲಾವೃತಗೊಂಡಿರುವ ತೋಟ-ಗದ್ದೆಗಳನ್ನು ಮಂಗಳವಾರ ಉಪ ವಿಭಾಗಾಧಿಕಾರಿ ಶ್ರೀಮತಿ ಎನ್.ದುರ್ಗಾಶ್ರೀ ವೀಕ್ಷಣೆ ಮಾಡಿದರು.  ಇದಕ್ಕೂ ಮುನ್ನ ಉಕ್ಕಡಗಾತ್ರಿ ಅಜ್ಜಯ್ಯನ ದೇವಸ್ಥಾನದ ಬಳಿ ತುಂಗಭದ್ರಾ ನದಿ ನೀರು ಸುತ್ತುವರೆದಿರುವುದನ್ನು ನೋಡಿ ಭಕ್ತರು ನದಿಗಿಳಿಯದಂತೆ ಕೈಗೊಂಡಿರುವ ಕ್ರಮಗಳನ್ನು ಪರಿಶೀಲಿಸಿದರು. ಉಪತಹಶೀಲ್ದಾರ್ ಆರ್‌.ರವಿ, ಪಿ.ಆರ್‌.ಐ.ಡಿ. ಎಇಇ ಗಿರೀಶ್, ಗ್ರಾಮ ಲೆಕ್ಕಾಧಿಕಾರಿ ಆನಂದ ತೀರ್ಥ, ಪಿಡಿಓ ರಾಮಚಂದ್ರಪ್ಪ ಮತ್ತು ದೇವ ಸ್ಥಾನದ ಕಾರ್ಯದರ್ಶಿ ಸುರೇಶ್ ಈ ವೇಳೆ ಹಾಜರಿದ್ದರು.

error: Content is protected !!