ಬೆಂಗಳೂರು, ಜು. 13- ದಾವಣಗೆರೆ ನಗರದಲ್ಲಿ ನ್ಯಾಯಾಂಗ ಸಂಕೀರ್ಣ ನಿರ್ಮಾಣದ ಪ್ರಗತಿ ಪರಿಶೀಲನೆಯನ್ನು ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ನಡೆಸಿದರು. ಸಂಕೀರ್ಣ ನಿರ್ಮಾಣ ಮಾಡುವ ಸಂದರ್ಭದಲ್ಲಿ ಸಾಕಷ್ಟು ಮುಂಜಾಗ್ರತೆ ವಹಿಸಬೇಕು. ಹಿಂದಿನ ನ್ಯೂನತೆಗಳನ್ನು ಸರಿಪಡಿಸಿ, ನಿರ್ಮಾಣ ಕಾರ್ಯವು ಮಾದರಿಯಾಗಿರಬೇಕು ಎಂದು ಸಚಿವರು ಸೂಚಿಸಿದರು. ಈ ಸಂದರ್ಭದಲ್ಲಿ ಮುಖ್ಯ ವಾಸ್ತುಶಿಲ್ಪಿ ಶ್ರೀಧರ್ ಹಾಗೂ ಲೋಕೋಪಯೋಗಿ ಇಲಾಖೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ನ್ಯಾಯಾಂಗ ಸಂಕೀರ್ಣ ಪ್ರಗತಿ ಪರಿಶೀಲಿಸಿದ ಸಚಿವ ಎಸ್ಸೆಸ್ಸೆಂ
![03 nyayanga sankeerna 14.07.2023 ನ್ಯಾಯಾಂಗ ಸಂಕೀರ್ಣ ಪ್ರಗತಿ ಪರಿಶೀಲಿಸಿದ ಸಚಿವ ಎಸ್ಸೆಸ್ಸೆಂ](https://janathavani.com/wp-content/uploads/2023/07/03-nyayanga-sankeerna-14.07.2023-860x293.jpg)