ದಾವಣಗೆರೆ ನಿಟುವಳ್ಳಿಯ ದುರ್ಗಾಂಬಿಕಾ ದೇವಸ್ಥಾನದ ಕಡೆಯಿಂದ ರಾಷ್ಟ್ರೋತ್ಥಾನ ಶಾಲೆ ಕಡೆ ಹೋಗುವ ಮಾರ್ಗವಿದು. ಇಲ್ಲಿನ ಪೈಪ್ ಲೈನ್ ಕಾಮಗಾರಿಯಿಂದ ಜನ ಬೇಸತ್ತಿದ್ದಾರೆ. ಇತ್ತೀಚೆಗಷ್ಟೇ ರಸ್ತೆ ಅಗೆಯಲೆಂದು ರಸ್ತೆ ಸಂಪರ್ಕ ಬಂದ್ ಮಾಡಲಾಗಿತ್ತು. ಈ ಮಾರ್ಗವಾಗಿ ತೆರಳುವ ವಾಹನಗಳು ಸುತ್ತಿಕೊಂಡು ಬೇರೆ ಮಾರ್ಗದಿಂದ ಹೋಗಬೇಕಾಗಿತ್ತು. ಇನ್ನೇನು ರಸ್ತೆ ಸಂಚಾರಕ್ಕೆ ಮುಕ್ತ ಎನ್ನುವಷ್ಟರಲ್ಲಿ ಮತ್ತೆ ಪೈಪ್ ಲೈನ್ ಕಾಮಗಾರಿ ಆರಂಭವಾಗಿದ್ದು, ಪ್ರಯಾಣಿಕರಿಕೆ ತಲೆ ನೋವಾಗಿ ಪರಿಣಮಿಸಿದೆ. ಆದಷ್ಟು ಶೀಘ್ರ ಕಾಮಗಾರಿ ಮುಗಿಸಿ ಓಡಾಡಲು ಅನುವು ಮಾಡಿಕೊಡಲಿ ಎಂಬುದು ಇಲ್ಲಿನ ನಾಗರಿಕರ ಆಗ್ರಹ.
ಮತ್ತೆ ಮತ್ತೆ ಕಾಮಗಾರಿ: ಹೈರಾಣಾದ ಪ್ರಯಾಣಿಕರು
![25 kamagaari news 13.07.2023 ಮತ್ತೆ ಮತ್ತೆ ಕಾಮಗಾರಿ: ಹೈರಾಣಾದ ಪ್ರಯಾಣಿಕರು](https://janathavani.com/wp-content/uploads/2023/07/25-kamagaari-news-13.07.2023-860x447.jpg)