ರಾಜ್ಯ ರೈತ ಸಂಘದ ಉಪಾಧ್ಯಕ್ಷ ವಾಸನ ಗ್ರಾಮದ ಓಂಕಾರಪ್ಪ (62) ಅವರು ಶುಕ್ರವಾರ ಬೆಳಗಿನಜಾವ 3.30 ಕ್ಕೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ನಿಧನರಾದರು. ಕೊರೊನಾ ಸೋಂಕಿನಿಂದ ಬಳಲುತ್ತಿದ್ದ ಅವರು, ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆಂದು ಹೇಳ ಲಾಗಿದೆ. ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿಯನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ಶುಕ್ರವಾರ ಮಧ್ಯಾಹ್ನ ವಾಸನ ಸಮೀಪ ತುಂಗಭದ್ರಾ ನದಿ ದಡದಲ್ಲಿ ನೆರವೇರಿತು.
February 26, 2025