ದಾವಣಗೆರೆ ಪಿ.ಜೆ. ಬಡಾವಣೆ ವಾಸಿ, ಎಪಿಎಂಸಿ ವರ್ತಕರಾದ ಶ್ರೀ ಕಂಬಳಿ ಕೆ.ಎಂ. ಶಿವಮೂರ್ತಯ್ಯ ಅವರು ದಿನಾಂಕ 14.08.2020ರ ಶುಕ್ರವಾರ ಬೆಳಿಗ್ಗೆ 5.30 ಕ್ಕೆ ಹೃದಯಾಘಾತದಿಂದ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ. ಮೃತರಿಗೆ ಸುಮಾರು 65 ವರ್ಷ ವಯಸ್ಸಾಗಿತ್ತು. ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿ, ಮೊಮ್ಮಕ್ಕಳು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯನ್ನು ದಿನಾಂಕ 14.08.2020ರ ಶುಕ್ರವಾರ ಸಂಜೆ ಶಾಮನೂರಿನ ರುದ್ರಭೂಮಿಯಲ್ಲಿ ನೆರವೇರಿಸಲಾಯಿತು.
February 24, 2025