ಚನ್ನಗಿರಿ ತಾಲ್ಲೂಕು ಕತ್ತಲಗೆರೆ ಗ್ರಾಮದ ವಾಸಿ, ನಿವೃತ್ತ ತಹಶೀಲ್ದಾರ್ ದಿ|| ಜಿ. ಎಂ. ಜಯದೇವಪ್ಪ ಅವರ ಧರ್ಮಪತ್ನಿ, ದಾವಣಗೆರೆಯ ಧ.ರಾ.ಮ. ವಿಜ್ಞಾನ ಕಾಲೇಜಿನ ನಿವೃತ್ತ ಪ್ರಾಚಾರ್ಯರಾದ ಡಾ|| ಜೆ.ಬಿ. ರಾಜ್ ಹಾಗೂ ಎಕ್ಸಿಕ್ಯೂಟಿವ್ ಇಂಜಿನಿಯರ್ ಶ್ರೀ ಜೆ. ಮಲ್ಲಿಕಾರ್ಜುನ ಗೌಡ ಮತ್ತು ದಾವಣಗೆರೆ ಬಾಪೂಜಿ ಇಂಜಿನಿಯರಿಂಗ್ ಕಾಲೇಜಿನ ಪ್ರೊಫೆಸರ್ ಡಾ|| ಜಿ. ಮಾನವೇಂದ್ರ ಇವರ ತಾಯಿಯವರೂ ಹಾಗೂ ಕೃಷಿ ಸಚಿವರಾದ ಶ್ರೀ ಬಿ.ಸಿ. ಪಾಟೀಲ್ ಮತ್ತು ಎಸ್.ಎಸ್. ಹೈಟೆಕ್ ಮೆಡಿಕಲ್ ಕಾಲೇಜಿನ ಪ್ರೋಫೆಸರ್ ಡಾ|| ಸಿ.ಜೆ. ಶಾಂತಕುಮಾರ್ ಇವರ ಅತ್ತೆಯವರೂ ಆದ ಶ್ರೀಮತಿ ಜಿ.ಎಸ್. ಮಲ್ಲಮ್ಮ ಅವರು ದಿನಾಂಕ 06.08.2020ರ ಗುರುವಾರ ಹೃದಯಾಘಾತದಿಂದ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ. ಮೃತರಿಗೆ ಸುಮಾರು 81 ವರ್ಷ ವಯಸ್ಸಾಗಿತ್ತು. ಶ್ರೀಮತಿ ಮಲ್ಲಮ್ಮ ಅವರು, ಮೂವರು ಪುತ್ರರು, ಇಬ್ಬರು ಪುತ್ರಿಯರು ಅಳಿಯಂದಿರು, ಸೊಸೆಯಂದಿರು, ಮೊಮ್ಮಕ್ಕಳು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆಯನ್ನು ದಿನಾಂಕ 06.08.2020ರ ಗುರುವಾರದಂದು ಕತ್ತಲಗೆರೆ ಗ್ರಾಮದಲ್ಲಿ ನೆರವೇರಿಸಲಾಯಿತು ಎಂದು ಕುಟುಂಬದವರು ತಿಳಿಸಿದ್ದಾರೆ.
July 6, 2024