ದಾವಣಗೆರೆ ಎಂ.ಸಿ.ಸಿ. `ಬಿ’ ಬ್ಲಾಕ್ 3ನೇ ಮೇನ್, 3ನೇ ಕ್ರಾಸ್ ವಾಸಿ ಕೆ.ಇ.ಬಿ. ನಿವೃತ್ತ ನೌಕರರೂ, ದೀಪ್ತಿ ಟೆಂಟ್ ಹೌಸ್ ಮಾಲೀಕರೂ ಆದ ಶ್ರೀ ಗೌಡರ ಬಸವರಾಜಪ್ಪ ಅವರು ದಿನಾಂಕ 15.10.2020ರ ಗುರುವಾರ ರಾತ್ರಿ 9.00 ಗಂಟೆಗೆ ಹೃದಯಾಘಾತದಿಂದ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ. ಮೃತರಿಗೆ ಸುಮಾರು 79 ವರ್ಷ ವಯಸ್ಸಾಗಿತ್ತು. ಪತ್ನಿ, ನಾಲ್ವರು ಪುತ್ರರು, ಸೊಸೆಯಂದಿರು, ಮೊಮ್ಮಕ್ಕಳು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯನ್ನು ದಿನಾಂಕ 16.10.2020ರ ಶುಕ್ರವಾರ ಬೆಳಿಗ್ಗೆ 9.30 ಕ್ಕೆ ನಗರದ ವೀರಶೈವ ರುದ್ರಭೂಮಿಯಲ್ಲಿ ನೆರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
July 23, 2024